23.1 C
Sidlaghatta
Monday, October 27, 2025

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು

- Advertisement -
- Advertisement -

ಸಾಧಕರ ಸಾಧನೆಗೆ ಕಾರಣ ಶಿಕ್ಷಕರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸಮಾಜದ ಬೆಳವಣಿಗೆಗೆ ಕಾರಣಕರ್ತರಾಗುವ ಶಿಕ್ಷಕರು ಕೇವಲ ಪಾಠಪ್ರವಚನಗಳನ್ನು ಕಲಿಸುವುದಷ್ಟೆ ಅಲ್ಲದೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಡೆಗೆ ಚಿಂತನೆ ನಡೆಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆ.ವಿ.ಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ಆಯೋಜನೆ ಮಾಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಿದ್ದಾಗ ಮಾತ್ರ ಸಮಾಜ ಆರೋಗ್ಯವಂತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ಸಮಾಜದ ನಿರ್ಮಾಣಕ್ಕೆ ಶಿಕ್ಷಕರು ಕಾರಣಕರ್ತರಾಗಬೇಕು. ಶಿಕ್ಷಣ ಕ್ಷೇತ್ರವನ್ನು ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸಮಾಜದಲ್ಲಿನ ಪರಿವರ್ತನೆ ಹಾಗೂ ಅಭಿವೃದ್ಧಿ ಸಾಧ್ಯವಾಗುವುದಿಲ್ಲವೆಂದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ರಘು ಮಾತನಾಡಿ, ಶಿಕ್ಷಕರು ವೃತ್ತಿ, ಶಾಲೆಗೆ ಮಾತ್ರ ಸೀಮಿತರಾಗಬಾರದು. ವಿದ್ಯಾರ್ಥಿಗಳನ್ನು ಬೆಳೆಸುತ್ತಾ ತಾವೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ತಿರುತ್ತಣಿಯಿಂದ ದೆಹಲಿವರೆಗಿನ ಪಯಣದಲ್ಲಿ ಛಲ, ಆದರ್ಶ, ಮೌಲ್ಯ, ವೃತ್ತಿ ಗೌರವ, ಜ್ಞಾನ, ಕಲಿಯುವ ದಾಹ ಎಲ್ಲವೂ ಇತ್ತು. ಅವು ಶಿಕ್ಷಕರಿಗೆ ಪ್ರೇರಣೆಯಾಗಬೇಕು. ಜಾತಿಯೆಂಬುದು ಶಿಕ್ಷಣ ಕ್ಷೇತ್ರದಿಂದ ಹೊರತಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಶಿಕ್ಷಕರಿಗೆ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿಕ್ಷಕಿಯರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದ ಭವನದಲ್ಲಿ ಅಲ್ಲಲ್ಲಿ ಹಾಕಲಾಗಿದ್ದ ಸೂಕ್ತಿಫಲಕಗಳು ಎಲ್ಲರ ಗಮನಸೆಳೆದವು. ವೇದಿಕೆಯ ಅಲಂಕಾರವನ್ನು ವಿಶಿಷ್ಠವಾಗಿ ವರ್ಲಿಚಿತ್ರಕಲೆ ಹಾಗೂ ವಿವಿಧ ಹೂಗಳಿಂದ ಮಾಡಿದ್ದ ಶಿಕ್ಷಕರಾದ ಎಂ.ದೇವರಾಜ್, ಎಸ್.ಕಲಾಧರ್, ಡಿ.ನಾರಾಯಣಸ್ವಾಮಿ ಮತ್ತು ಎಂ.ಬಾಲಚಂದ್ರ ಅವರನ್ನು ಅಭಿನಂದಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಕೆ.ವಿ.ಭವನ ಅಧ್ಯಕ್ಷ ಬಿಳಿಶಿವಾಲೆ ರವಿ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸಮನ್ವಯಾಧಿಕಾರಿ ಕೆ.ಸುಮಾ, ನಿವೃತ್ತ ಎಸ್ಪಿ ನಾಗರಾಜ್, ಬಿ.ವಿ.ಶ್ರೀರಾಮಯ್ಯ, ವಿಜಯಕುಮಾರ್, ಮುನಿರಾಜು, ಗೋಪಿನಾಥ್, ನಾರಾಯಣಸ್ವಾಮಿ, ಪಿಳ್ಳಣ್ಣ, ಕೆಂಪಣ್ಣ, ಬೈರಾರೆಡ್ಡಿ, ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸನ್ಮಾನಿತ ನಿವೃತ್ತ ಶಿಕ್ಷಕರು
ಪ್ರಾಥಮಿಕ ವಿಭಾಗ
ವಿ.ಪ್ರಕಾಶ್, ವಿ.ಮುನಿರಾಜು, ಎನ್.ನಾರಾಯಣಸ್ವಾಮಿ, ರಜಿಯಾಖಾನಂ, ನಾರಾಯಣಸ್ವಾಮಿ, ಎಚ್.ಕೆ.ಮಧುರಾ, ಎಚ್.ಮುನಿಯಪ್ಪ, ಡಿ.ರಾಜೇಶ್ವರಿ, ಸಿ.ಲಕ್ಷ್ಮಿದೇವಮ್ಮ, ಎಂ.ಪಾರ್ವತಮ್ಮ, ಸಿ.ಎನ್.ರತ್ನಮ್ಮ, ಪಿ.ಗೋದಾವರಿ, ಎಸ್.ಎಂ.ಶಾರದಮ್ಮ, ಜಿ.ಎನ್.ಶಾಮಸುಂದರ್, ಎಸ್.ರವಿ, ಲಕ್ಷ್ಮೀನರಸಪ್ಪ.
ಪ್ರೌಢಶಾಲೆ ವಿಭಾಗ
ಕೆ.ಆರ್.ಜಗದೀಶ್, ಎನ್.ನಾರಾಯಣಸ್ವಾಮಿ, ಎಂ.ಆರ್.ಬಾಲಗಂಗಾಧರ ತಿಲಕ, ವೆಂಕಟರಮಣಪ್ಪ, ಎಸ್.ಎಂ.ಮುನಿಯಪ್ಪ, ಬಿ.ಕೃಷ್ಣಮೂರ್ತಿ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರು
ಬುಡ್ಡೂಸಾಬಿ, ಎಂ.ಎನ್.ಮಂಜುನಾಥ್

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!