25.1 C
Sidlaghatta
Thursday, December 25, 2025
Home Blog Page 15

ಸಿದ್ಧರಾಮಯ್ಯ ಎತ್ತಿನಹೊಳೆ ನೀರು ಹರಿಸಿದರೆ ರಾಜಕೀಯ ಸನ್ಯಾಸ

0
Y A Narayanaswamy

Sidlaghatta : “ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರುವ ಅವಧಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಿದರೆ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ” ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ಸವಾಲು ಹಾಕಿದ್ದಾರೆ.

ನಗರದ ಬಿಜೆಪಿ ಸೇವಾ ಸೌಧದಲ್ಲಿ ಬುಧವಾರ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರ ನೋಂದಣಿ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಬಂಗಾರಪೇಟೆಯಲ್ಲಿ ನೀಡಿದ ಹೇಳಿಕೆಯಲ್ಲಿ — ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಎಂದಿದ್ದಾರೆ. ಆದರೆ ಈ ಯೋಜನೆಯ ಮೂಲ ಉದ್ದೇಶವೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು. ಇಂದಿಗೆ ಯೋಜನೆಯ ಉದ್ದೇಶವೇ ಮರೆತುಬಿಟ್ಟಿದ್ದಾರೆ. ಯೋಜನೆಯ ವೆಚ್ಚವನ್ನು ₹8,835 ಕೋಟಿ ರೂ.ದಿಂದ ₹30,000 ಕೋಟಿ ರೂ.ವರೆಗೆ ಏರಿಸಿದ್ದು ಮಾತ್ರ ಅವರ ಸಾಧನೆ!” ಎಂದು ಟೀಕಿಸಿದರು.

ನಾರಾಯಣಸ್ವಾಮಿ ಮುಂದುವರಿಸಿ, “ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಸಂವಹನ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಯವರ ದುರಹಂಕಾರದಿಂದಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳು ಹಿಂದುಳಿದಿವೆ. ರಾಜ್ಯ ಬಡವಾಗುತ್ತಿದೆ” ಎಂದು ಆರೋಪಿಸಿದರು.

ಅವರು ಬಿಜೆಪಿ ಪರವಾಗಿ ವಿಶ್ವಾಸ ವ್ಯಕ್ತಪಡಿಸಿ, “ಎನ್‌ಡಿಎಗೆ ಈಗ ಶುಕ್ರದೆಸೆ ಪ್ರಾರಂಭವಾಗಿದೆ. ಗ್ರಾಮ ಪಂಚಾಯಿತಿ ಇಂದಿನಿಂದ ಬಿಬಿಎಂಪಿ ತನಕ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತದೆ. ಮುಂದಿನ ಸರ್ಕಾರ ನಮ್ಮದ್ದಾಗಲಿದೆ” ಎಂದು ಹೇಳಿದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಕುರಿತು ಅವರು ಟೀಕಿಸಿ, “ಪಂಚ ಗ್ಯಾರಂಟಿ ಎಂಬ ಛೂಮಂತ್ರ ಹೇಳುತ್ತಾ ಜನರ ಗಮನ ತಪ್ಪಿಸುತ್ತಿದ್ದಾರೆ. ಯುವನಿಧಿ ಯೋಜನೆ ರಾಜ್ಯದ ಕೇವಲ 3% ನಿರುದ್ಯೋಗಿ ಪದವೀಧರರಿಗೂ ಸಿಕ್ಕಿಲ್ಲ. ಜಿಲ್ಲೆಯ ಪ್ರಕಾರ ಎಷ್ಟು ಜನರಿಗೆ ಸಹಾಯಧನ ನೀಡಲಾಗಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾತನಾಡಿದ ಅವರು, “ಭಾರತ್ ಪೆಟ್ರೋಲಿಯಂನ ನಿವೃತ್ತ ಅಧಿಕಾರಿಯ ಮಗಳ ಶವ ಸಾಗಣೆಯ ವೇಳೆ ಲಂಚ ಪಡೆಯಲಾಗಿದೆ — ಇದು ಸಿದ್ಧರಾಮಯ್ಯ ಸರ್ಕಾರದ ಕಾರ್ಯವೈಖರಿಯ ನಿದರ್ಶನ. ಜನರ ಆಕ್ರೋಶ ಉಕ್ಕುತ್ತಿದೆ, ಶೀಘ್ರದಲ್ಲೇ ಜನ ಬೀದಿಗಿಳಿಯುವರು” ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿರುವಾಗ ರಾಜ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ ಅವರು ಅವರ ಜೊತೆ ನಿಂತಿದ್ದಾರೆ. ಇಂತಹ ಜನಪರ ನಾಯಕರಿಂದಲೇ ರಾಜ್ಯದ ನಿಜವಾದ ಅಭಿವೃದ್ಧಿ ಸಾಧ್ಯ,” ಎಂದರು.

ಸಭೆಯಲ್ಲಿ ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಸುರೇಂದ್ರಗೌಡ, ನರೇಶ್ ಹಾಗೂ ಇತರ ಬಿಜೆಪಿ ಮುಖಂಡರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-05/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 364
Qty: 18507 Kg
Mx : 733
Mn: 246
Avg: 642

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 17
Qty: 923 Kg
Mx : ₹806
Mn: ₹ 666
Avg: ₹ 748


For Daily Updates WhatsApp ‘HI’ to 7406303366

Sidlaghatta Silk Cocoon Market-04/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 400
Qty: 21234 Kg
Mx : 725
Mn: 388
Avg: 644

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 04
Qty: 189 Kg
Mx : ₹821
Mn: ₹ 715
Avg: ₹ 771


For Daily Updates WhatsApp ‘HI’ to 7406303366

ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ

0
Sidlaghatta Sri Someshwara Swamy Temple Rejuvenation

Sidlaghatta, chikkaballapur : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಜೀರ್ಣೋದ್ಧಾರ ಹಾಗೂ ವಿಮಾನಗೋಪುರದ ಮಹಾ ಸಂಪ್ರೋಕ್ಷಣಾ ಪ್ರತಿಷ್ಠಾಪನಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಶನಿವಾರದಿಂದ ಆರಂಭವಾದ ಈ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರದವರೆಗೆ ನಡೆಯಿತು.

ಶನಿವಾರದಂದು ಗಣೇಶಪೂಜೆ, ಕಂಕಣಬಂಧನ, ಸ್ವಸ್ತಿ ಪುಣ್ಯಾಹ, ದೇವನಾಂದಿ ಕಲಶ ಪ್ರತಿಷ್ಠೆ ಸೇರಿದಂತೆ ಪೂಜಾ ವಿಧಿವಿಧಾನಗಳು ನಡೆಯಿತು. ಭಾನುವಾರ ಅಧಿವಾಸ ಹೋಮ, ತತ್ವ ಹವನ, ನವಗ್ರಹಹವನ, ಗಣೇಶ ಹವನ ಹಾಗೂ ಕಲಾ ನಿದರ್ಶನಗಳ ಮೂಲಕ ದೇವಾಲಯದ ಆವರಣದಲ್ಲಿ ಧಾರ್ಮಿಕ ವಾತಾವರಣ ಕಂಗೊಳಿಸುತ್ತಿತ್ತು.

ಮೂರನೇ ದಿನವಾದ ಸೋಮವಾರ, ಸರ್ವದೇವರ ಮಹಾಭಿಷೇಕ, ನೇತ್ರೋನ್ಮೀಲನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು. ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯದ ಪುನರ್‌ನಿರ್ಮಾಣ ಮತ್ತು ಗೋಪುರ ಸಂಪ್ರೋಕ್ಷಣೆಯು ನಗರದಲ್ಲಿ ಭಕ್ತಿ ಹಾಗೂ ಹರ್ಷದ ವಾತಾವರಣವನ್ನು ಸೃಷ್ಟಿಸಿತು.

ಕಾರ್ಯಕ್ರಮದಲ್ಲಿ ಸಂಸದ ಎಂ. ಮಲ್ಲೇಶಬಾಬು, ಶಾಸಕ ಬಿ.ಎನ್. ರವಿಕುಮಾರ್, ಕಾಂಗ್ರೆಸ್ ಮುಖಂಡರು ಡಾ. ಎಂ. ಶಶಿಧರ್, ಆಂಜಿನಪ್ಪ (ಪುಟ್ಟು), ಬಿ.ವಿ. ರಾಜೀವ್‌ಗೌಡ, ತಹಶೀಲ್ದಾರ್ ಗಗನಸಿಂಧೂ ಹಾಗೂ ಶ್ರೀಸೋಮೇಶ್ವರಸ್ವಾಮಿ ದೇವಾಲಯಾಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-03/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 03/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 354
Qty: 18051 Kg
Mx : 730
Mn: 469
Avg: 646

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 301 Kg
Mx : ₹756
Mn: ₹ 600
Avg: ₹ 708


For Daily Updates WhatsApp ‘HI’ to 7406303366

ಶಿಡ್ಲಘಟ್ಟ ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ : ಸಚಿವ ಡಾ. ಎಂ.ಸಿ. ಸುಧಾಕರ್

0
Sidlaghatta Development Projects Dr M C Sudhakar

Sidlaghatta, chikkaballapur : ಶಿಡ್ಲಘಟ್ಟ ನಗರದ ಇತಿಹಾಸ ಪ್ರಸಿದ್ಧ ಶ್ರೀ ಶೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿ, ಶಿಡ್ಲಘಟ್ಟವನ್ನು ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ ಕೊಂಡೊಯ್ಯುವ ಭರವಸೆ ನೀಡಿದರು.

ದೇವಾಲಯದ ಪುನರ್‌ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, “ಭಕ್ತರ ಸಹಕಾರದಿಂದ ಎ ನಾಗರಾಜ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಪುಣ್ಯಕಾರ್ಯ ನಡೆಯುತ್ತಿದೆ. ಶಿಡ್ಲಘಟ್ಟದ ಜನರ ಉತ್ಸಾಹ ಶ್ಲಾಘನೀಯ” ಎಂದರು.

ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಶಿಡ್ಲಘಟ್ಟಕ್ಕೆ ಭೇಟಿ ನೀಡಲಿದ್ದು, ತಾಲ್ಲೂಕಿನ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. “ಬಹುನಿರೀಕ್ಷಿತ ಹೈಟೆಕ್ ರೇಷ್ಮೆ ಮಾರುಕಟ್ಟೆ ಯೋಜನೆಗೆ 200 ಕೋಟಿ ರೂಪಾಯಿ ಮಂಜೂರಾಗಿದ್ದು, ಜೊತೆಗೆ ರಾಮಸಮುದ್ರದಿಂದ ಶಿಡ್ಲಘಟ್ಟಕ್ಕೆ ಶುದ್ಧ ಕುಡಿಯುವ ನೀರು, 35 ಕೋಟಿ ರೂ.ಗಳ ಒಳಚರಂಡಿ ಯೋಜನೆ, ಅಮರಾವತಿಯಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟನೆ ಮತ್ತು ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ,” ಎಂದು ಹೇಳಿದರು.

ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಜಾರಿಗೊಳಿಸಿದ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳು ಅಂತರ್ಜಲ ವೃದ್ಧಿಗೆ ಮಹತ್ವದ ವಹಿಸುತ್ತವೆ. “ಈ ಯೋಜನೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ 45 ಕೆರೆಗಳು ಮತ್ತು ಚಿಂತಾಮಣಿಯ 119 ಕೆರೆಗಳಿಗೆ ನೀರು ಹರಿಸುವ ಕೆಲಸ ಪ್ರಾರಂಭವಾಗಿದೆ. ವೃಷಭಾವತಿ ನದಿಯ ಸಂಸ್ಕರಿಸಿದ ನೀರನ್ನು ದೇವನಹಳ್ಳಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ಪ್ರದೇಶಗಳಿಗೆ ಹರಿಸುವ ಯೋಜನೆಗೂ ಅನುಮೋದನೆ ದೊರೆತಿದೆ,” ಎಂದು ಸಚಿವರು ತಿಳಿಸಿದರು.

ಅವರು ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸುತ್ತಾ, “ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವ ಆರೋಪಗಳ ನಡುವೆಯೂ, ಮುಖ್ಯಮಂತ್ರಿಗಳು ಶಿಡ್ಲಘಟ್ಟದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಜನತೆಗೆ ಅಭಿವೃದ್ಧಿಯ ನಿಜವಾದ ದೃಷ್ಟಿಕೋಣ ಸ್ಪಷ್ಟವಾಗಲಿದೆ,” ಎಂದರು.

ಎತ್ತಿನಹೋಳೆ ಯೋಜನೆ ಕುರಿತು ಮಾತನಾಡಿದ ಸಚಿವರು, “ಯೋಜನೆಯ ಪ್ರಗತಿ ಇದೀಗ ವೇಗ ಪಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಯತ್ನದಿಂದ ರೈತರ ಸಹಕಾರ ಪಡೆದು ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದೆ. ಮುಂದಿನ 2.5 ವರ್ಷಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪನೆ ಸೇರಿ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶವಿದೆ,” ಎಂದರು.

ಅಜ್ಜವಾರ ಕೆರೆ ಚೆಕ್‌ಡ್ಯಾಂ ಬಗ್ಗೆ ಉಲ್ಲೇಖಿಸಿ, “ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. ನೀವು ವರದಿ ನೀಡಿ, ಸಣ್ಣ ನೀರಾವರಿ ಇಲಾಖೆಯ ಮೂಲಕ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿಗೆ ನ್ಯಾಯ ದೊರೆತಿಲ್ಲವೆಂಬ ಆರೋಪಕ್ಕೆ ಉತ್ತರಿಸಿದ ಅವರು, ಪ್ರಶಸ್ತಿ ಆಯ್ಕೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ವಹಿಸಲಾಗಿತ್ತು, ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗಗನ ಸಿಂಧೂ, ಶ್ರೀ ಸೋಮೇಶ್ವರ ದೇವಾಲಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎ ನಾಗರಾಜ್, ಜಾತವರ ಸುರೇಶ್, ವೈದ್ಯ ಸತ್ಯನಾರಾಯಣ ರಾವ್, ರೂಪಸಿ ರಮೇಶ್, ಭಕ್ತಾದಿಗಳು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಹಂದಿಬೇಟೆ ವೀರಗಲ್ಲು, 15ನೇ ಶತಮಾನದ ಅಪರೂಪದ ಕನ್ನಡ ಶಾಸನ ಪತ್ತೆ

0
Handi Bete Veeragallu 15th century Kannada Scripture found

Mallur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆ ವೇಳೆ ನಾಯಿಯ ಸ್ಮಾರಕವಾಗಿ ನಿರ್ಮಿಸಲಾದ ಹಂದಿಬೇಟೆ ವೀರಗಲ್ಲು ಶಿಲ್ಪ ಪತ್ತೆಯಾಗಿದೆ. ಇದರೊಂದಿಗೆ ನಾಲ್ಕು ಸಾಲುಗಳ ಕನ್ನಡ ಶಾಸನವೂ ಕಂಡುಬಂದಿದೆ. ಸ್ಥಳೀಯ ಇತಿಹಾಸಾಸಕ್ತರು ಮತ್ತು ಶಾಸನ ತಜ್ಞರ ಪ್ರಕಾರ, ಈ ಶಿಲ್ಪವು ಸುಮಾರು 15ನೇ ಶತಮಾನದ್ದು (ಕ್ರಿ.ಶ. 1432ರ ಮಾರ್ಚ್ 8, ಶನಿವಾರ) ಎಂದು ಅಂದಾಜಿಸಲಾಗಿದೆ.

ಮಣ್ಣಿನಲ್ಲಿ ಹುದುಗಿದ್ದ ಈ ಶಿಲ್ಪವನ್ನು ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ನಾಣಿ, ರೆಡ್ಡಿ, ಬೇಕರಿ ವೆಂಕಟೇಶ್, ಮಧು, ಶ್ರೀನಿವಾಸ ನಾಯಕ್, ನರಸಿಂಹಮೂರ್ತಿ, ಅಶೋಕ್ ಅವರು ಪತ್ತೆಹಚ್ಚಿದರು. ನಂತರ ಶಾಸನ ತಜ್ಞರಾದ ಧನಪಾಲ್ ಮತ್ತು ತ್ಯಾಗರಾಜ್ ಅವರು ಶಾಸನದಲ್ಲಿರುವ ಲಿಪಿಯನ್ನು ಓದಿದರು.

Handi Bete Veeragallu

ಶಾಸನದ ಪ್ರಕಾರ, ಗ್ರಾಮದ ವೊಂಡೆದೆಯರ ಬಾಣ ಎಂಬ ವ್ಯಕ್ತಿ ತನ್ನ “ಬೀಮಾಂಚ” ಎಂಬ ನಾಯಿಯೊಂದಿಗೆ ಹಂದಿಬೇಟೆಗೆ ತೆರಳಿದಾಗ, ಬಲಿಷ್ಠ ಹಂದಿಯೊಂದಿಗೆ ಹೋರಾಟ ನಡೆಯಿತು. ಹಂದಿಯನ್ನು ಕೊಂದು ನಾಯಿಯೂ ಪ್ರಾಣತ್ಯಾಗ ಮಾಡಿತು. ತನ್ನ ಮುದ್ದಿನ ನಾಯಿಯ ಶೌರ್ಯವನ್ನು ನೆನಪಿಸಲು “ಸೂರ್ಯ ಚಂದ್ರರಿರುವವರೆಗೂ ನಾಯಿಯ ವೀರತ್ವ ಉಳಿಯಲಿ” ಎಂಬ ಉದ್ದೇಶದಿಂದ ಈ ಸ್ಮಾರಕವನ್ನು ನಿರ್ಮಿಸಲಾಗಿದೆ ಎಂದು ಶಾಸನದಿಂದ ತಿಳಿಯುತ್ತದೆ.

ಈ ಆವಿಷ್ಕಾರದ ಮಹತ್ವದ ಬಗ್ಗೆ ಶಾಸನ ತಜ್ಞ ಡಿ.ಎನ್. ಸುದರ್ಶನರೆಡ್ಡಿ ಅವರು ವಿವರಿಸಿ, “ಹಂದಿಬೇಟೆ ವೀರಗಲ್ಲುಗಳು ಕೇವಲ ಸ್ಥಳೀಯ ಸ್ಮಾರಕಗಳಲ್ಲ; ಇವು ಕನ್ನಡನಾಡಿನ ಇತಿಹಾಸದ ಮಹತ್ವದ ಘಟನೆಗಳ ಸಾಕ್ಷಿಗಳಾಗಿವೆ. ಮಂಡ್ಯ ಜಿಲ್ಲೆಯ ಆತಕೂರಿನ ಹಂದಿಬೇಟೆ ವೀರಗಲ್ಲು, ಕ್ರಿ.ಶ. 943ರಲ್ಲಿ ನಡೆದ ತಕ್ಕೋಳಂ ಯುದ್ಧದಲ್ಲಿ ಕನ್ನಡಿಗರ ಚೋಳರ ಮೇಲೆ ಜಯದ ದಾಖಲೆ ನೀಡುತ್ತದೆ,” ಎಂದು ಹೇಳಿದರು.

ಅವರು ಮುಂದುವರಿಸಿ, “ಆತಕೂರಿನ ಶಾಸನದಿಂದ ರಾಷ್ಟ್ರಕೂಟರ ಮೂರನೇ ಕೃಷ್ಣ ಮತ್ತು ಗಂಗರಾಜಕುಮಾರ ಬೂತುಗನ ಸಾಹಸ ತಿಳಿಯುತ್ತದೆ. ಬೂತುಗನ ಸಹಚರ ಮನಲೇರ ಮತ್ತು ಅವನ ನಾಯಿ ‘ಕಾಳಿ’ ಕುರಿತಾದ ಕಥೆಯು ಕೂಡ ಈ ಶಾಸನಗಳಲ್ಲಿ ದಾಖಲಾಗಿದೆ. ಕಾಳಿ ಹಂದಿಯೊಡನೆ ಹೋರಾಡಿ ಮರಣ ಹೊಂದಿದಾಗ, ಅದಕ್ಕಾಗಿ ದೇವಾಲಯವನ್ನೇ ನಿರ್ಮಿಸಿ ಪೂಜೆ ವ್ಯವಸ್ಥೆ ಮಾಡಲಾಗಿತ್ತು. ಇಂತಹ ವೀರಗಲ್ಲುಗಳು ಸಿಕ್ಕಿರಲಿಲ್ಲವಾದರೆ ಕನ್ನದಿಗಾರ ಇತಿಹಾಸದ ಅನೇಕ ಅಧ್ಯಾಯಗಳು ಮರೆಯಾಗಿ ಹೋಗುತ್ತವೆ,” ಎಂದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-02/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 02/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 262
Qty: 13401 Kg
Mx : 715
Mn: 425
Avg: 622

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 11
Qty: 689 Kg
Mx : ₹764
Mn: ₹ 562
Avg: ₹ 720


For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ರಾಜ್ಯೋತ್ಸವ ಸಂಭ್ರಮ

0
Kannada Rajyotsava Celebration Sidlaghatta

Sidlaghatta, Chikkaballapur : ಪ್ರತಿಯೊಬ್ಬರ ಹೃದಯದಲ್ಲಿ ಕನ್ನಡ ಬೆಳಗಲಿ. ಕನ್ನಡ ಬೆಳೆಸುವುದು, ನಾಡು ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ. ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಭಾಷೆಯ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ,” ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.

ನಗರದ ಸಲ್ಲಾಪುರಮ್ಮ ದೇವಾಲಯದ ಬಳಿ ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ರೇಷ್ಮೆ ನಗರ ಕನ್ನಡ ರಾಜ್ಯೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ನಾಡಧ್ವಜಾರೋಹಣ ನೆರವೇರಿಸಿ, 150 ಅಡಿ ಎತ್ತರದ ಕನ್ನಡ ಧ್ವಜವನ್ನು ಎತ್ತಿದರು. ಈ ಸಂದರ್ಭದಲ್ಲಿ ಕಲಾತಂಡಗಳು ಮತ್ತು ಅಮ್ಮನ ರಥಮೆರವಣಿಗೆಗೆ ಚಾಲನೆ ನೀಡಿದರು.

ಭಾಷೆ ಮತ್ತು ಸಂಸ್ಕೃತಿಯ ನಡುವಿನ ಆಪ್ತ ಸಂಬಂಧವನ್ನು ಉಲ್ಲೇಖಿಸಿದ ಅವರು, “ಕನ್ನಡ ಭಾಷೆ ಕೇವಲ ಮಾತಿನ ಮಾಧ್ಯಮವಲ್ಲ, ಅದು ನಮ್ಮ ನೆಲದ ಆತ್ಮ. ಅನೇಕ ತಲೆಮಾರುಗಳ ಕಷ್ಟ-ಸಾಧನೆಗಳ ಪರಂಪರೆಯನ್ನು ಕಾಪಾಡಿಕೊಂಡು ಬಂದ ಕನ್ನಡ, ನಮ್ಮ ಅಸ್ತಿತ್ವದ ಸಂಕೇತವಾಗಿದೆ. ರಾಜ್ಯೋತ್ಸವವು ಸ್ವಾಭಿಮಾನ ಮತ್ತು ಸಹಬಾಳ್ವೆಯ ಪ್ರತೀಕ” ಎಂದು ಹೇಳಿದರು.

ನಾಡೋತ್ಸವದ ವೇದಿಕೆ ಮೇಲೆ ಸಂಭ್ರಮ

Kannada Rajyotsava Celebration Sidlaghatta

ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಹತ್ತಿರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, “ಕನ್ನಡ ರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಅಸ್ತಿತ್ವದ ಗುರುತು. ಕನ್ನಡದ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು; ನಿತ್ಯವೂ ಕನ್ನಡ ಬದುಕಲಿ, ಬೆಳಗಲಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಗೌರವ ನೀಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 33 ವಿದ್ಯಾರ್ಥಿಗಳನ್ನು, ಹಾಗು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ತಾಲ್ಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ. ಅಮೃತ, ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ರೇಷ್ಮೆ ನಗರ ರಾಜ್ಯೋತ್ಸವ ಸಮಿತಿಯ ರಾಮಾಂಜನೇಯ, ಸೂರಿ (ಭಗತ್), ಸುನಿಲ್, ರೂಪಸಿರಮೇಶ್, ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ನಾರಾಯಣಸ್ವಾಮಿ, ಮುನಿರಾಜು (ಕುಟ್ಟಿ), ಶ್ರೀರಾಮ್, ಸೋಮಶೇಖರ್, ಲಕ್ಷ್ಮಿದೇವಿ, ಮಂಜುಳ ಎಂ., ಲಾವಣ್ಯ, ಮಂಜುಳ ಎ. ಹಾಗೂ ಕನ್ನಡ ಪರ ಮತ್ತು ರೈತ ಪರ ಸಂಘಟನೆಯ ಅನೇಕ ಸದಸ್ಯರು ಹಾಜರಿದ್ದರು.

ಜಿಲ್ಲಾಡಳಿತದ ವಿರುದ್ಧ ಕಲಾವಿದನ ವಿನೂತನ ಪ್ರತಿಭಟನೆ

View on Threads

“ನಮ್ಮಂತಹ ಕಲಾವಿದರಿಗೆ ಮರಣೋತ್ತರ ಪ್ರಶಸ್ತಿಯನ್ನಾದರೂಳು ಜಿಲ್ಲಾಡಳಿತ ನೀಡಲಿ” ಎಂದು‌ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು ಕವಿ, ಕಲಾವಿದ ಈಧರೆ ತಿರುಮಲ ಪ್ರಕಾಶ್.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶಿಡ್ಲಘಟ್ಟವನ್ನು ಕಡೆಗಣಿಸಿರುವ ಬಗ್ಗೆ, ತಮ್ಮ ಸಾಧನೆಯನ್ನು ಕಡೆಗಣಿಸಿರುವ ಬಗ್ಗೆ ಈಧರೆ ತಿರುಮಲ ಪ್ರಕಾಶ್ ಅವರು ತಮಗೆ ಲಭಿಸಿರುವ ಪ್ರಮಾಣಪತ್ರಗಳನ್ನು ಹಾರದಂತೆ ಧರಿಸಿ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-01/11/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 01/11/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 415
Qty: 21635 Kg
Mx : 722
Mn: 350
Avg: 582

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 11
Qty: 607 Kg
Mx : ₹ 771
Mn: ₹ 566
Avg: ₹ 702


For Daily Updates WhatsApp ‘HI’ to 7406303366

error: Content is protected !!