27.1 C
Sidlaghatta
Thursday, July 10, 2025

ಅಗಲಿದ ನಾಯಕನಿಗೆ ಶ್ರದ್ಧಾಂಜಲಿ

- Advertisement -
- Advertisement -

ರೈತಪರ ಹೋರಾಟಗಾರ, ಚಿಂತಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದಿಂದಾಗಿ ರಾಜ್ಯದ ರೈತರಿಗೆ ತುಂಬಲಾದರ ನಷ್ಟವಾಗಿದೆ ಎಂದು ಪುಟ್ಟಣ್ಣಯ್ಯ ಬಣದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಕೆ.ಎಸ್.ಪುಟ್ಟಣ್ಣಯ್ಯರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹೃದಯಾಘಾತದಿಂದ ನಿನ್ನೆ ನಿಧನರಾದ ರೈತ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯರವರು ರೈತರಿಗೆ ಮಾಡಿರುವ ಸೇವೆ ಅಪಾರವಾದದ್ದು. ರೈತರ ಪರ ಅನೇಕ ಹೋರಾಟಗಳು ನಡೆಸಿದ್ದ ಅವರು ನಮಗೆಲ್ಲಾ ಆದರ್ಶ. ಅವರ ಜೀವನವೇ ನಮಗೆ ಮಾರ್ಗದರ್ಶನ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುನಿಕೆಂಪಣ್ಣ, ಪ್ರತೀಶ್, ಎಸ್.ಎಂ.ಗೋವಿಂದಪ್ಪ, ಅಫ್ಜಲ್, ಎಸ್.ಎನ್.ಮಾರಪ್ಪ, ಅರುಣ್ ಕುಮಾರ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ರಮೇಶ್, ಅಶ್ವತನಾರಾಯಣ, ಗಜೇಂದ್ರ, ನಾಗರಾಜು, ವೆಂಕಟನಾರಾಯಣ, ಚಂದ್ರಪ್ಪ, ನಾಗೇಶ್, ರಮೇಶ್, ಬಿ.ವಿ.ನಾರಾಯಣಸ್ವಾಮಿ, ದೇವರಾಜು ಹಾಜರಿದ್ದರು.
ಶ್ರದ್ಧಾಂಜಲಿ: ನಗರದ ಬಸ್ ನಿಲ್ದಾಣದ ಬಳಿಯ ರೈತ ಸಂಘದ ಕಚೇರಿಯ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಸದಸ್ಯರು ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಎಸ್.ಎಂ.ನಾರಾಯಣಸ್ವಾಮಿ, ರಾಮಚಂದ್ರಪ್ಪ, ದೇವರಾಜ್, ರಾಮಾಂಜಿನಪ್ಪ, ನಂಜಪ್ಪ, ಸುರೇಶ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!