ಅಧ್ಯಯನ ಪ್ರವಾಸಕ್ಕೆ ಮಹಾರಾಷ್ಟ್ರ ಹೊರಟ ಮಾವು ಬೆಳೆಗಾರರು

- Advertisement -
- Advertisement -

ಮಾವು ಮತ್ತು ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾವು ಅಭಿವೃದ್ಧಿ ನಿಗಮದಿಂದ ಮಾವು ಬೆಳೆಗಾರರನ್ನು ಮಹಾರಾಷ್ಟ್ರಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ಹೊರವಲಯದ ರೇಷ್ಮೆ ಇಲಾಖೆಯ ಕಚೇರಿಯ ಬಳಿ ಮಂಗಳವಾರ ಅಧ್ಯಯನ ಪ್ರವಾಸಕ್ಕೆ ಹೊರಟ ರೈತರನ್ನು ಬೀಳ್ಕೊಡುತ್ತಾ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಿಂದ 23 ಮಂದಿ ಮಾವು ಬೆಳೆಗಾರರು ಹೊರಟಿದ್ದಾರೆ. ಜಿಲ್ಲೆಯಾಧ್ಯಂತ ಒಟ್ಟು 40 ಮಂದಿ ಹೊರ ರಾಜ್ಯಕ್ಕೆ ಹೊರಟಿದ್ದು, ಅಲ್ಲಿನವರು ಕಂಡುಕೊಂಡ ಹೊಸ ವಿಷಯಗಳನ್ನು ತಿಳಿದುಕೊಂಡು ಬಂದು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಪ್ರವಾಸದ ಉದ್ದೇಶ ನಮ್ಮಲ್ಲಿ ಮಾವು ಬೆಳೆಗಾರರು ಆರ್ಥಿಕವಾಗಿ ಸಬಲರಾಗಬೇಕು ಎಂಬುದಾಗಿದೆ ಎಂದು ಹೇಳಿದರು.
ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿ ಗಾಯಿತ್ರಿ ಮಾತನಾಡಿ, ಮಹಾರಾಷ್ಟ್ರದ ಪ್ರಮುಖ ನಾಲ್ಕು ಮಾವು ಸಂಶೋಧನಾ ಕೇಂದ್ರಗಳಿಗೆ ರೈತರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ತಳಿಯ ಉತ್ಪಾದನೆಯಿಂದ ಹಿಡಿದು ಹಣ್ಣಿನ ವಿವಿಧ ಉತ್ಪನ್ನಗಳವರೆಗೂ ತಂತ್ರಜ್ಞಾನದ ತಿಳುವಳಿಗೆ ಪಡೆಯಬಹುದು. ಈ ಕಲಿಕೆಯಿಂದ ಮಾವು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಮುನೇಗೌಡ, ಅಧಿಕಾರಿಗಳಾದ ಆನಂದ್, ಗೀತಾ, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಎಸ್.ಎಂ.ನಾರಾಯಣಸ್ವಾಮಿ, ಟಿ.ಕೃಷ್ಣಪ್ಪ, ಅಂಬರೀಷ್, ಮೂರ್ತಿ, ನಾರಾಯಣಸ್ವಾಮಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!