ಕೇಂದ್ರೀಯ ಮೋಟಾರ್ ವಾಹನ ನಿಯಮದ ತಿದ್ದುಪಡಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುವ ಆಂದೋಲನದಲ್ಲಿ ಭಾಗಿಯಾಗಲು ಭಾನುವಾರ ಶಿಡ್ಲಘಟ್ಟದಿಂದ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಆಟೋ ಚಾಲಕರು ತೆರಳಿದರು.
ನಗರದ ಅಮೀರ್ಬಾಬಾ ದರ್ಗಾ ಬಳಿ ಸೇರಿದ್ದ ಆಟೋ ಚಾಲಕರನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ವಿಸ್ಡಂ ನಾಗರಾಜ್, ‘ಕೇಂದ್ರೀಯ ಮೋಟಾರ್ ವಾಹನ ನಿಯಮದ ತಿದ್ದುಪಡಿಯಿಂದಾಗಿ ಬಹಳಷ್ಟು ಬಡ ಕುಟುಂಬಗಳು ಬೀದಿಗೆ ಬರುತ್ತವೆ. ಎಂಟನೇ ತರಗತಿ ಓದಿದವರಿಗೆ ಮಾತ್ರ ವಾಹನ ಚಾಲನೆ ಪರವಾನಗಿ ನೀಡಬೇಕೆಂಬ ನಿಯಮದಿಂದ ಸಾಕಷ್ಟು ಮಂದಿ ಬಡವರು ತೊಂದರೆಗೊಳಗಾಗುತ್ತಾರೆ. ಜನರನ್ನು ವಿದ್ಯಾವಂತರನ್ನಾಗಿಸುವ ನೆಪದಲ್ಲಿ ಸರ್ಕಾರ ಅವೈಜ್ಞಾನಿಕ ರೀತಿಯಲ್ಲಿ ಕಾನೂನು ಬದಲಯಿಸಬಾರದು. ಬಹುತೇಕ ವಾಹನ ಚಾಲಕರು ಬಡವರು ಮತ್ತು ಅವಿದ್ಯಾವಂತರೇ ಆಗಿರುತ್ತಾರೆ. ಹೀಗಿರುವಾಗ ಅವರ ಹೊಟ್ಟೆಯ ಮೇಲೆ ಹೊಡೆಯುವ ಕಾನೂನು ರೂಪಿಸುವ ಮೂಲಕ ಬಡವರ ವಿರೋಧಿ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಇದನ್ನು ವಿರೋಧಿಸುತ್ತೇವೆ’ ಎಂದು ಹೇಳಿದರು.
ಘೋಷಣೆಗನ್ನು ಕೂಗುತ್ತಾ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಆಟೋ ಚಾಲಕರು ಮೆರವಣಿಗೆಯನ್ನು ನಡೆಸಿ ನಂತರ ಬೆಂಗಳೂರಿನಲ್ಲಿನ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದರು.
ಆಮ್ ಆದ್ಮಿ ಪಕ್ಷದ ಸಹ ಸಂಚಾಲಕರಾದ ಇದಾಯತ್, ಇನಾಯತ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಮೌಲಾ, ಷಬೀರ್, ಅಸ್ಲಂ, ರಫೀಕ್, ಇಮ್ರಾನ್, ಅಹ್ಮದ್, ತೌಸೀಫ್, ಸುರೇಶ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -