30.2 C
Sidlaghatta
Saturday, April 20, 2024

ಆಳ್ವಾಸ್ ಶಾಲೆಗೆ ಕ್ರೀಡಾ ಕೋಟಾದಡಿ ಪ್ರವೇಶಕ್ಕೆ ಅವಕಾಶ ಪಡೆದ ಚೈತನ್ಯ

- Advertisement -
- Advertisement -

ನಗರದ ಹೊರವಲಯದ ಹನುಮಂತಪುರ ಗೇಟ್‌ನ ಬಿಜಿಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಆರ್.ಚೈತನ್ಯ ಕ್ರೀಡಾ ಕೋಟಾದಡಿ ಪ್ರತಿಷ್ಠಿತ ಮೂಡುಬಿದರೆಯ ಆಳ್ವಾಸ್ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿದ್ದಾಳೆ.
ನಗರದ ದೇಶದಪೇಟೆಯ ವಾಸಿ ರಾಜಶೇಖರ್‌ ಮತ್ತು ಲತಾ ಅವರ ಪುತ್ರಿಯಾದ ಆರ್.ಚೈತನ್ಯ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಕ್ರೀಡಾ ವಿದ್ಯಾರ್ಥಿಯಾಗಿದ್ದು ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಳು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ಮಾರ್ಗದರ್ಶನದಲ್ಲಿ ಓಟದ ತರಬೇತಿ ಪಡೆಯುತ್ತಿರುವ ಆರ್.ಚೈತನ್ಯ ಕ್ರೀಡಾ ಕೋಟಾದಡಿ ಪ್ರತಿಷ್ಠಿತ ಆಳ್ವಾಸ್ ಶಾಲೆಗೆ ಪ್ರವೇಶಕ್ಕೆ ಅವಕಾಶ ಪಡೆಯುವ ಮೂಲಕ ಇಂತಹ ಅವಕಾಶ ಪಡೆದ ತಾಲ್ಲೂಕಿನ ಮೊದಲಿಗಳಾಗಿದ್ದಾಳೆ.
ಶಾಸಕ ಎಂ.ರಾಜಣ್ಣ ಕ್ರೀಡಾ ವಿದ್ಯಾರ್ಥಿ ಚೈತನ್ಯಗಳನ್ನು ಅಭಿನಂದಿಸಿದ್ದು ಶಾಲೆಯ ಪ್ರವೇಶ ಸೇರಿದಂತೆ ಇತರೆ ಕ್ರೀಡೆ, ವಿದ್ಯಾಭ್ಯಾಸಕ್ಕೆ ಅಗತ್ಯ ಇರುವ ತನ್ನಿಂದ ಆಗುವ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಇಂತಹ ಸಾಧನೆಗೆ ಪ್ರೇರಣೆಯಾದ ಮಾರ್ಗದರ್ಶನ ನೀಡಿದ ತರಬೇತುದಾರ ಮುನಿರಾಜು, ಪೋಷಕರಾದ ರಾಜಶೇಖರ್ ಕಾರ್ಯಕ್ಕೆ ಶ್ಲಾಘಿಸಿದರು. ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ತರಬೇತಿ ಪಡೆಯುತ್ತಿರುವ ಇತರೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!