ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘದಿಂದ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ದಿನಾಚರಣೆ 2017 ಹಾಗೂ ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ತಾಲ್ಲೂಕು ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರೆಡ್ಕ್ರಾಸ್ ವತಿಯಿಂದ ಆಯೋಜಿಸಲಾಗಿದೆ.ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಾಲಿಂಗಯ್ಯ ಮಠ್ ಅವರಿಂದ ನಡೆಸಿಕೊಡುವರು. ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣವನ್ನು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ನೆರವೇರಿಸುವರು.
- Advertisement -
- Advertisement -