ಪ್ರಾಚೀನ ಸಮರ ಕಲೆಯಾದ ಕರಾಟೆ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಜಿಕೋ ಬೋಯಿ ಕರಾಟೆ ಡೊ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಎಂ.ಡಿ.ಜಭೀವುಲ್ಲಾ ಹೇಳಿದರು.
ನಗರದ ಕ್ರೆಸೆಂಟ್ ಶಾಲಾ ಆವರಣದಲ್ಲಿ ಗುರುವಾರ ಜಿಕೋ ಬೋಯಿ ಕರಾಟೆ ಡೊ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಕರಾಟೆ ಬ್ಲಾಕ್ ಬೆಲ್ಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯೆಯಲ್ಲಿ ಮಾತ್ರ ಮುಂದುವರೆದಂರೆ ಸಾಲದು, ದೈಹಿಕವಾಗಿ ಹಾಗೂ ಆರೋಗ್ಯವಂತರಾಗಲು ಕ್ರೀಡೆ ಬಹು ಮುಖ್ಯ ಎಂದರು. ಆತ್ಮ ರಕ್ಷಣೆಯ ಕಲೆಯಾಗಿರುವ ಕರಾಟೆಯನ್ನು ಅತಿಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಈಚೆಗೆ ಮುಂಬೈನಲ್ಲಿ ನಡೆದ ಕರಾಟೆ ಸ್ಪರ್ದೆಯಲ್ಲಿ ಜಿಲ್ಲೆಯಿಂದ ೫ ಮಂದಿ ವಿದ್ಯಾರ್ಥಿಗಳು ಮಾತ್ರಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ, ಅದರಲ್ಲಿ ಮುಖ್ಯವಾಗಿ ಅತಿ ಕಿರಿಯ ವಯಸ್ಸಿನ ಟಿ.ಎನ್.ಹೇಮಂತ್ ೧೦ ವರ್ಷದ ಅತಿ ಕಿರಿಯ ವಯಸ್ಸಿನಲ್ಲಿ ಬ್ಲಾಕ್ ಬೆಲ್ಟ್ ಪಡೆಯುವ ಮೂಲಕ ಜಿಲ್ಲೆ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಪ್ರಥಮ ಕಿರಿಯ ಕ್ರೀಡಾ ಪಟು ಎಂಬ ಹಿರಿಮೆಗೆ ಪಾತ್ರನಾಗಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ಟಿ.ಎನ್.ಹೇಮಂತ್, ಅಕಿತ್, ಓಂಕಾರ್, ವಿಶಾಲ್, ಸಮೀರ್ ಎಂಬ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ವಿತರಣೆ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ದಿ ಕ್ರೆಸೆಂಟ್ ವಿದ್ಯಾ ಸಂಸ್ಥೆಯ ಸಿರಾಜ್ಉಲ್ಲಾ, ತಮೀಮ್ ಅನ್ಸಾರಿ, ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್, ಗೌರವಾಧ್ಯಕ್ಷ ಎಸ್.ವಿ.ನಾಗರಾಜ್ರಾವ್, ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಜಯಂತಿ ಗ್ರಾಮದ ನಾರಾಯಣಸ್ವಾಮಿ, ಗೌರಿಬಿದನೂರು ಕರಾಟೆ ತರಬೇರುದಾರ ಚಂದ್ರಶೇಖರ್, ಟಿ.ಟಿ.ನರಸಿಂಹಪ್ಪ, ಶಿವಪ್ಪ,ಮುನಿರಾಜು, ವೇಣು ಹಾಜರಿದ್ದರು.
- Advertisement -
- Advertisement -
- Advertisement -