ಕಾಯಕದ ಮೂಲಕವೇ ಸಂತ ಪದವಿಗೇರಿದವರು ವಚನಕಾರರು

0
553

ಕಾಯಕದ ಮೂಲಕವೇ ಸಂತ ಪದವಿಗೇರಿದವರು ಹಾಗೂ ದೇವರನ್ನು ಸಾಕ್ಷೀಕರಿಸಿಕೊಂಡವರು ವಚನಕಾರರು. ತಮ್ಮ ವಚನಗಳ ಮೂಲಕ ಸಮಾಜದ ಜಾಡ್ಯ ದೂರ ಮಾಡಿದವರು ಅವರು ಎಂದು ಶಾಸಕ ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ದಲಿತ ವಚನಕಾರರ ಜಯಂತ್ಯುತ್ಸವ ಹಾಗೂ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅನೇಕ ದಲಿತ ವಚನಕಾರರು ವಚನಗಳನ್ನು ತಮ್ಮ ಅನುಭವ ಮತ್ತು ಕಾಯಕದ ಹಿನ್ನೆಲೆಯಲ್ಲಿ ರಚಿಸಿದರು. ೧೨ ನೇ ಶತಮಾನದಲ್ಲಿ ಮೇಲು ಕೀಳು ಎಂಬ ಭಾವನೆಗಳಡಿಯಲ್ಲಿ ಜಾತಿ ವ್ಯವಸ್ಥೆ ತುಂಬಿ ತುಳುಕಾಡುತ್ತಿದ್ದ ಸಮಯದಲ್ಲಿ ಸಮ ಸಮಾಜ ನಿರ್ಮಿಸುವಲ್ಲಿ ದಲಿತ ವಚನಕಾರರ ಶ್ರಮ ಶ್ಲಾಘನೀಯ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸಮಕಾಲೀನರಾದ ದಲಿತ ವಚನಕಾರ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯ ರಂತಹವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತ ಮುನಿವೆಂಕಟಪ್ಪ, ಈಧರೆ ಕಲಾ ತಂಡದ ಪ್ರಕಾಶ್, ಉಪನ್ಯಾಸಕ ಅರಿಕೆರೆ ಮುನಿರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಅಜಿತ್ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಪ್ರಭಾರಿ ನಗರಸಭಾ ಅದ್ಯಕ್ಷೆ ಪ್ರಭಾವತಿ ಸುರೇಶ್, ಗ್ರೇಡ್೨ ತಹಸೀಲ್ದಾರ್ ಮುನಿಕೃಷ್ಣಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಎ.ಚಂದ್ರಶೇಖರ್ಬಾಬು, ದಸಂಸ ಸಂಚಾಲಕ ಎನ್.ವೆಂಕಟೇಶ್ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!