18.1 C
Sidlaghatta
Sunday, November 16, 2025

ಕೆಂಪೇಗೌಡರ ಜಯಂತ್ಯುತ್ಸವ ಪ್ರಚಾರಕ್ಕೆ ಚಾಲನೆ

- Advertisement -
- Advertisement -

ನಾಡಪ್ರಭು ಕೆಂಪೇಗೌಡರ 507ನೇ ಜಯಂತ್ಯುತ್ಸವವನ್ನು ಜೂನ್‌ 27 ರಂದು ಆಚರಿಸಲಿದ್ದು, ಕಾರ್ಯಕ್ರಮವನ್ನು ಜನಾಂಗದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಾಡಬೇಕಿರುವುದರಿಂದ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿರುವುದಾಗಿ ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ತಿಳಿಸಿದರು.
ನಗರದ ಒಕ್ಕಲಿಗರ ಭವನದಿಂದ ಮಂಗಳವಾರ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಕುರಿತಂತೆ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನಾಂಗದವರೂ ಸೇರಿದಂತೆ ಗ್ರಾಮದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಮುಂದಾಗಿ ಪಲ್ಲಕ್ಕಿಯನ್ನು ತರಯವ ಗ್ರಾಮಸ್ಥರಿಗೆ ಸಹಕಾರವನ್ನು ಕೂಡ ನೀಡುತ್ತಿದ್ದೇವೆ. ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡುತ್ತಿದ್ದೇವೆ. ಕೆಂಪೇಗೌಡರ ಗೌರವವನ್ನು ಹೆಚ್ಚಿಸಲು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜನಾಂಗದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಸಿ.ಮುನಿರಾಜು, ಚೀಮನಹಳ್ಳಿ ಗೋಪಾಲ್‌, ರಮೇಶ್‌, ಮೇಲೂರು ಚಂದ್ರೇಗೌಡ, ವೆಂಕಟರೆಡ್ಡಿ, ಎಸ್‌.ಎಂ.ನಾರಾಯಣಸ್ವಾಮಿ, ಕೃಷ್ಣಪ್ಪ, ಮೇಲೂರು ಆರ್‌.ಎ.ಉಮೇಶ್‌, ಶ್ರೀನಿವಾಸ್‌, ಎ.ಎಂ.ತ್ಯಾಗರಾಜ್‌, ಶಶಿಕುಮಾರ್‌, ಜೆ.ವಿ.ಸುರೇಶ್‌, ಕೆಂಪರೆಡ್ಡಿ, ದೇವರಾಜ, ಪಿಳ್ಳಪ್ಪ, ಮುರಳಿ, ಪುರುಷೋತ್ತಮ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!