20.1 C
Sidlaghatta
Wednesday, February 11, 2026

ಕೆನರಾ ಬ್ಯಾಂಕಿನಲ್ಲಿ ಹಣವಿಲ್ಲ, ಬೇಸರಗೊಂಡ ಗ್ರಾಹಕರು

- Advertisement -
- Advertisement -

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣದ ಬದಲಾವಣೆಯನ್ನು ಸ್ಥಗಿತಗೊಳಿಸಿರುವ ಆರ್.ಬಿ.ಐ. ಒಬ್ಬ ಖಾತೆದಾರರಿಗೆ ಒಂದು ವಾರದಲ್ಲಿ ೨೪ ಸಾವಿರ ಪಡೆಯಲು ಅವಕಾಶ ಮಾಡಿಕೊಟ್ಟಿದ್ದರೂ ನಗರದ ಕೆನರಾ ಬ್ಯಾಂಕಿನಲ್ಲಿ ಹಣದ ಕೊರತೆಯಿಂದಾಗಿ ಗ್ರಾಹಕರಿಗೆ ಹಣ ನೀಡದೆ ಇರುವುದರಿಂದ ಗ್ರಾಹಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಲ್ಲಿದ್ದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಪರದಾಡುತ್ತಿದ್ದ ಗ್ರಾಹಕರು, ಬ್ಯಾಂಕುಗಳಲ್ಲಿ ನೀಡುತ್ತಿರುವ ಕೇವಲ ೨೦೦೦ ರೂಪಾಯಿಗಳನ್ನು ಪಡೆದುಕೊಳ್ಳಲು ಬ್ಯಾಂಕುಗಳ ಮುಂದೆ ದಿನವಿಡೀ ಸಾಲುಗಟ್ಟಿ ನಿಂತು ಬೇಸತ್ತಿದ್ದರು. ಸೋಮವಾರ ನಗರದ ಕೆನರಾ ಬ್ಯಾಂಕಿನ ಮುಂದೆ ರಿಸರ್ವ್ ಬ್ಯಾಂಕಿನಿಂದ ಹಣ ಸರಬರಾಜಾಗಿಲ್ಲವೆಂಬ ಕಾರಣಕ್ಕಾಗಿ ತಮ್ಮ ಖಾತೆಗಳಿಗೆ ಹಣ ತುಂಬಿಸುವವರು ಮಾತ್ರ ಬ್ಯಾಂಕಿನ ಮುಂದೆ ಸಾಲಾಗಿ ನಿಲ್ಲಿ, ಹಣ ಡ್ರಾ ಮಾಡುವವರು ಯಾರೂ ನಿಲ್ಲಬೇಡಿ ಎಂದು ಬೋರ್ಡ್ ಅಳವಡಿಸಿರುವುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.
ಆಸ್ಪತ್ರೆ, ಮದುವೆ, ದಿನನಿತ್ಯದ ವ್ಯವಹಾರಗಳಿಗಾಗಿ ಹಣವಿಲ್ಲದೆ ಪರದಾಡುವಂತಾಗಿದ್ದು, ಎಲ್ಲಾ ಬ್ಯಾಂಕುಗಳಿಗೂ ಹಣ ಬರುತ್ತಿದೆ. ಕೆನರಾ ಬ್ಯಾಂಕಿನವರಿಗೆ ಮಾತ್ರ ಹಣ ಬರುತ್ತಿಲ್ಲವೇ ಎಂದು ಗ್ರಾಹಕರಾದ ಶಿವಕುಮಾರ್, ಅರುಣ್‌ಬಾಬು, ರಾಘವೇಂದ್ರ, ಪ್ರಭಾವತಿ ಮುಂತಾದವರು ಬೇಸರ ವ್ಯಕ್ತಪಡಿಸಿದ್ದಾರೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!