20.4 C
Sidlaghatta
Wednesday, July 16, 2025

ಕೊತ್ತನೂರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ತಿಳುವಳಿಕೆ ನೀಡಿದ ಆರೋಗ್ಯ ಸಿಬ್ಬಂದಿ

- Advertisement -
- Advertisement -

ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದು ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲೆಯ ತಂತ್ರಜ್ಞ ಟಿ.ಟಿ.ನರಸಿಂಹಪ್ಪ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಶನಿವಾರ ಡೆಂಗ್ಯೂ ಖಾಯಿಲೆಯ ಬಗ್ಗೆ ತಿಳಿವಳಿಕೆಯನ್ನು ಮನೆ ಮನೆಗೆ ಹೋಗಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮನೆಯ ಬಳಿ ಚರಂಡಿಗಳಲ್ಲಿ ಅಪಾರವಾಗಿ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಿವೆ. ಶಾಲೆಯ ಮುಂದಿನ ಚರಂಡಿಯಲ್ಲೂ ತ್ಯಾಜ್ಯದ ನೀರು ತುಂಬಿ ಲಾರ್ವಾಗಳು ಉತ್ಪತ್ತಿಯಾಗಿವೆ. ಗ್ರಾಮ ಪಂಚಾಯ್ತಿಗೆ ವಿಷಯ ಮುಟ್ಟಿಸಿ ಔಷಧಿ ಸಿಂಪಡಿಸಬೇಕು. ಇಲ್ಲದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ವಾರಕ್ಕೆ ಒಂದು ದಿನ ವಾರದ ಒಣಗಳ ದಿನವನ್ನಾಗಿ ನೀರು ತುಂಬಿಸಿಟ್ಟ ಪಾತ್ರೆ ಡ್ರಮ್ಮುಗಳನ್ನು ಒಣಗಲು ಬಿಡಬೇಕು ಎಂದು ವಿವರಿಸಿದರು.
ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ಕೃಷ್ಣ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಳಿನಾ. ಆಶಾಕಾರ್ಯಕರ್ತೆಯರಾದ ಪುಷ್ಪ. ಮಂಜುಳ. ನಾರಾಯಣ್ಣಮ್ಮ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!