17.1 C
Sidlaghatta
Sunday, November 9, 2025

ಚಿತ್ರನಟ ಅಂಬರೀಶ್ ನೆನಪಿನಲ್ಲಿ ಗಿಡ ನೆಟ್ಟ ಕಸಾಪ ಸದಸ್ಯರು

- Advertisement -
- Advertisement -

ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಗುರುವಾರ ಕಸಾಪ ವತಿಯಿಂದ “ವನಸಿರಿ ನುಡಿಸಿರಿ” ಕಾರ್ಯಕ್ರಮದಲ್ಲಿ ಗ್ರಾಮದ ಕೆರೆಯಂಚಿನಲ್ಲಿ ಸಂಪಿಗೆ, ಗಸಗಸೆ ಮುಂತಾದ ಗಿಡಗಳನ್ನು ನೆಟ್ಟು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಚಿತ್ರನಟ ಅಂಬರೀಶ್ ನೆನಪಿನಲ್ಲಿ ಹಲವಾರು ಗಿಡಗಳನ್ನು ನೆಡುತ್ತಿದ್ದೇವೆ. ಗಿಡಗಳನ್ನು ನೆಟ್ಟಷ್ಟೇ ಪ್ರೀತಿಯಿಂದ ಅವನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.
ಯಣ್ಣಂಗೂರು ಗ್ರಾಮದ ಯುವಕರು ಪ್ರತಿವರ್ಷ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳುತ್ತಾರೆ. ಈ ಯುವಕರ ಜೊತೆಗೂಡಿ ಚಿತ್ರನಟ ಅಂಬರೀಶ್ ನೆನಪಿನಲ್ಲಿ ಹಲವು ಗಿಡಗಳನ್ನು ನೆಡುತ್ತಿದ್ದೇವೆ. ಪರಿಸರ ಕಾಪಾಡಿದಲ್ಲಿ ಮಾತ್ರ ನಮಗೆ ಉಳಿಗಾಲವಿದೆ. ಈಗ ಇರುವ ನೀರಿನ ಸಮಸ್ಯೆಗೆ ಪರಿಹಾರ ಗಿಡಗಳನ್ನು ನೆಟ್ಟು ಭೂಮಿಯನ್ನು ಆದಷ್ಟು ಹಸಿರುಮಯವನ್ನಾಗಿಸಬೇಕು ಎಂದು ಹೇಳಿದರು.
ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ನಿಮ್ಮ ಆರೋಗ್ಯಕ್ಕೂ ವರದಾನ. ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ. ನಿಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳಿ, ಅದನ್ನು ನೀರೆರೆದು ಪೋಷಿಸಲು ಮರೆಯಬೇಡಿ. ಇಂಗು ಗುಂಡಿಗಳನ್ನು ಸ್ಥಾಪಿಸಿ. ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಇಂಗಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡಿ ಎಂದರು.
ಅಶ್ವತ್ಥನಾರಾಯಣಗೌಡ, ರಾಮಚಂದ್ರಪ್ಪ, ಸೀತಾರೆಡ್ಡಿ, ನಾಗೇಶ್, ಅಶೋಕ್, ರಘು, ವಿಶ್ವನಾಥ್, ಮೋಹನ್, ಗಜೇಂದ್ರ, ಗೋಪಲಪ್ಪ, ಮೂರ್ತಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!