ಕೆಲಸ ಮಾಡುವವರಿಗೆ, ಪ್ರಗತಿ ಮತ್ತು ಅಭಿವೃದ್ಧಿಯತ್ತ ದುಡಿಯುವ ಕಾಳಜಿ ಇರುವವರಿಗೆ ನಿಮ್ಮ ಮತವನ್ನು ಮೀಸಲಿಡಿ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆನೂರು ಆಂಜಿನಪ್ಪ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಚೇರಿಯಲ್ಲಿ ವಿಶೇಷ ಚೇತನ, ವೃದ್ಧಾಪ್ಯ ವೇತನ , ವಿಧವಾ ವೇತನದ ಆದೇಶ ಪತ್ರಗಳನ್ನು ಸುಮಾರು 200 ಮಂದಿ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದಾದ್ಯಂತ ಕಳೆದ ಮೂರು ವರ್ಷಗಳಿಂದ ಸೇವಾ ಕಾರ್ಯಗಳನ್ನು ನಡೆಸುತ್ತಾ ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ನಗರದಲ್ಲಿ ಧೂಳು, ಕೆಟ್ಟ ರಸ್ತೆ, ಹದಗೆಟ್ಟ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕಿದೆ. ಗ್ರಾಮಗಳಲ್ಲಿ ಅನೇಕ ಬಡವರು, ಹಿಂದುಳಿದವರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸ್ವಯಂಪ್ರೇರಣೆಯಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಜನರ ಪರವಾಗಿ ಅವರ ಎಲ್ಲಾ ದಾಖೆಗಳನ್ನೂ ಕ್ರೂಡೀಕರಿಸಿ ಅಧಿಕಾರಿಗಳಿಗೆ ನೀಡಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ಸಿಗುವ ಹಾಗೆ ಮಾಡುತ್ತಿದ್ದೇವೆ.
ತಾಲ್ಲೂಕಿನಾದ್ಯಂತ ಈಗಾಗಲೇ ಸುಮಾರು ಎರಡು ಸಾವಿರ ಮಂದಿಗೆ ಈ ರೀತಿಯ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡಿದ್ದೇವೆ. ಹಲವಾರು ಮಂದಿ ಬಡವರಿಗೆ ಉಚಿತ ವೈದ್ಯಕೀಯ ನೆರವು, ಶಸ್ತ್ರಚಿಕಿತ್ಸೆಗೆ ನೆರವು ಹಾಗೂ ಅಂಗವಿಕಲರಿಗೆ ಸೂಕ್ತ ನೆರವನ್ನು ನೀಡಿದ್ದೇವೆ. ಸೌಲಭ್ಯ ವಂಚಿತ ಜನರ ಸಮಸ್ಯೆಗಳನ್ನು ನಿವಾರಿಸುವವರೇ ನಿಜವಾದ ಜನಪ್ರತಿನಿಧಿಗಳು. ನಿಮ್ಮ ಕೆಲಸ ಮಾಡಿಕೊಡುವವರಿಗೆ ಮತ ನೀಡಿ ಗೆಲ್ಲಿಸಿ. ಕರುಣೆ, ಆಮಿಷಕ್ಕೆ ಬಲಿಯಾಗದಿರಿ. ಅಭಿವೃದ್ಧಿಯೇ ನಿಮ್ಮ ಆಯ್ಕೆಗೆ ಮಾನದಂಡವಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಕ್ಷೇತ್ರದ ಜನರನ್ನು ಭೇಟಿಯಾಗುತ್ತಿದ್ದೇನೆ. ಜನರಿಂದ ಸಕಾರಾತ್ಮಕ ಅಭಿಪ್ರಾಯವಿದೆ ಎಂದರು.
ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ .ಮಾಜಿ ಅಧ್ಯಕ್ಷ ಅಶ್ವತ್ಥ್ನಾರಾಯಣ್, ಮುಖಂಡರಾದ ಅಫ್ಸರ್ಷಾಷ, ಆನೂರು ದೇವರಾಜ್, ನಟರಾಜ್, ಬೈರೆಗೌಡ, ಎಸ್.ವಿ.ಅಯ್ಯರ್, ವಿಶ್ವನಾಥ್, ಜಮೀರ್, ಪ್ರಕಾಶ್, ನರಸಿಂಹಪ್ಪ, ಬಾಷ ಹಾಜರಿದ್ದರು.
- Advertisement -
- Advertisement -
- Advertisement -
- Advertisement -