ನಗರದ ಗಾಂಧಿನಗರದ ಸಮೀಪ ಇದ್ಲೂಡು ರಸ್ತೆಯಲ್ಲಿ ಶುಕ್ರವಾರ ಮಹಿಳೆ ತಲೆ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ನಗರದ ಮಾರುತಿ ನಗರದ ನಿವಾಸಿಯಾದ ಪೈಂಟ್ ನಾಗರಾಜ್ ಅವರ ಪತ್ನಿ ಅನುಸೂಯಮ್ಮ(೪೫) ಮೃತಪಟ್ಟ ಮಹಿಳೆ. ಅನುಸೂಯಮ್ಮ ತನ್ನ ಎರಡೇ ಮಗ ಅನಿಲ್ ಕುಮಾರ್ ಜೊತೆ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು, ದ್ವಿಚಕ್ರ ವಾಹನದ ಹಿಂದೆ ಟ್ರ್ಯಾಕ್ಟರ್ ವೇಗವಾಗಿ ಬರುತ್ತಿತ್ತು, ಟ್ರ್ಯಾಕ್ಟರ್ಗೆ ಜಾಗ ಕೊಡಲೆಂದು ಪಕ್ಕಕ್ಕೆ ಹೋದಾಗ ದ್ವಿಚಕ್ರ ವಾಹನ ಮರಳಿನ ಮೇಲೆ ಜಾರಿ ವಾಹನದಲ್ಲಿ ಹೋಗುತ್ತಿದ್ದ ಅನುಸೂಯಮ್ಮ, ಅನಿಲ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಪಿ.ಡಬ್ಯು,ಡಿ ಇಲಾಖೆಗೆ ಸಂಬಂದಪಟ್ಟ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ ಹಿಂಬದಿಯ ಚಕ್ರ ಅನುಸೂಯಮ್ಮ ಅವರ ತಲೆಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅನಿಲ್ ಕುಮಾರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್ನ ಚಾಲಕ ಪರಾರಿಯಾಗಿದ್ದಾನೆ.
ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್, ಗ್ರಾಮಾಂತರ ಠಾಣೆ ಪಿ.ಎಸ್.ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
- Advertisement -
- Advertisement -
- Advertisement -







