ತಾಲ್ಲೂಕಿನಲ್ಲಿ ಇದುವರೆಗೂ ಹದಿನೈದು ಸಾವಿರ ಗಿಡಗಳನ್ನು ನೆಡಲಾಗಿದ್ದು, ಮುಂದೆ ಗ್ರಾಮಸ್ಥರ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ಧಿ ಸಮಿತಿ ಸಹಕಾರ ಪಡೆದು ಒಟ್ಟು ಒಂದು ಲಕ್ಷ ಗಿಡಗಳನ್ನು ನೆಡುತ್ತೇವೆ ಎಂದು ಚಲನಚಿತ್ರ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ನಗರದ ಸಿದ್ಧಾರ್ಥನಗರದ ಸರ್ಕಾರಿ ಶಾಲೆಯ ಬಳಿ ಭಾನುವಾರ ಆರ್.ಚಂದ್ರು ಅಭಿಮಾನಿ ಬಳಗದಿಂದ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಪ್ರತೀ ವಾರ 5 ರಿಂದ 10 ಸಾವಿರ ಉತ್ತಮ ಗುಣಮಟ್ಟದ ಗಿಡಗಳನ್ನು ನರ್ಸರಿಗಳಿಂದ ತರುತ್ತಿದ್ದೇನೆ. ಹಲವಾರು ಮಂದಿ ಆಸಕ್ತರು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ನನ್ನ ಉದ್ದೇಶ ತಾಲ್ಲೂಕಿನಲ್ಲಿ ಹಸಿರನ್ನು ಹೆಚ್ಚಿಸುವುದಾಗಿದೆ. ದಿಬ್ಬೂರಹಳ್ಳಿ ಹಾಗೂ ಅಪ್ಪೇಗೌಡನಹಳ್ಳಿಯ ಯುವಕರು ತಮ್ಮ ಗ್ರಾಮಗಳ ಸುತ್ತ ಮುತ್ತ ರಸ್ತೆ ಬದಿ ಗಿಡ ನೆಟ್ಟಿದ್ದನ್ನು ಕಾಪಾಡುವುದಾಗಿ ಸಂಕಲ್ಪ ತೊಟ್ಟಿರುವುದು ಆಶಾದಾಯಕ ಬೆಳವಣಿಗೆ. ಅಲ್ಲಿ ಹೋಗಿ ಗಿಡ ನೆಟ್ಟು ಬರುತ್ತೇವೆ. ಈ ಉತ್ಸಾಹ ಪ್ರತಿ ಗ್ರಾಮದ ಯುವಕರಲ್ಲೂ ಪ್ರಾರಂಭವಾಗಲಿ ಎಂದು ಹೇಳಿದರು.
ಬಿಗ್ಬಾಸ್ ವಿಜೇತ ಪ್ರಥಮ್ ಮಾತನಾಡಿ, ಹುಟ್ಟಿ ಬೆಳೆದ ತಾಲ್ಲೂಕಿನ ಬಗ್ಗೆ ಪ್ರೀತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಪಾಡಲು ಪ್ರರಂಭಿಸಿರುವ ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಲಿ, ಈಗಿನ ಯುವಕರು ಇಂಥಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ನುಡಿದರು, ಆರ್.ಚಂದ್ರು ಅಭಿಮಾನಿ ಬಳಗದ ಅಧ್ಯಕ್ಷ ವಿಜಯ್, ರಂಜಿತ್, ಸುರೇಶ್, ಪ್ರತಾಪ್, ಗಂಗಾಧರ್, ಚಂದ್ರು, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ, ನಾಗನರಸಿಂಹ, ಮಂಜುಳಮ್ಮ, ಮುನೀಂದ್ರ ಹಾಜರಿದ್ದರು.
- Advertisement -
- Advertisement -
- Advertisement -
- Advertisement -