ಶಿಡ್ಲಘಟ್ಟದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಎಂದಿನಂತೆ ಕುರಿಗಳನ್ನು ಮಾರುವವರು, ತರಕಾರಿ, ಮೊದಲಾದ ಸರಕುಗಳು ಹಾಗೂ ವಸ್ತುಗಳನ್ನು ರೈತರು ಮತ್ತು ವ್ಯಾಪಾರಿಗಳು ತಂದಿದ್ದರು. ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಸರ್ಕಾರದ ಆದೇಶದಂತೆ ಜನಸಂದಣಿಯನ್ನು ತಪ್ಪಿಸಲು ಮುಂಜಾನೆ ನಗರಸಭೆ ಸಿಬ್ಬಂದಿ ಮತ್ತು ಪೊಲೀಸರ ಸಂತೆಗೆ ಭೇಟಿ ನೀಡಿ ಮಾರಾಟಗಾರರನ್ನು ವಾಪಸ್ ಕಳುಹಿಸಿದರು.
ನಗರಸಭೆ ಅಧಿಕಾರಿಗಳ ಈ ಕ್ರಮಕ್ಕೆ ಕೆಲವು ಮಾರಾಟಗಾರರು ಬೇಸರ ವ್ಯಕ್ತಪಡಿಸಿದರು. ನಾವು ಇದನ್ನೇ ನಂಬಿ ಬದುಕುವವರು. ಈ ವಾರ ನಗರಸಭೆ ಅಧಿಕಾರಿಗಳು ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ನೀಡುತ್ತಿಲ್ಲ. ನಾವು ದೈನಂದಿನ ಗಳಿಕೆಯ ಮೇಲೆ ಅವಲಂಬಿತರಾಗಿದ್ದೇವೆ. ಮನೆಗಳಿಗೆ ಮತ್ತು ಸಾರಿಗೆ ವಾಹನಗಳಿಗೆ ಬಾಡಿಗೆ ಪಾವತಿಸಬೇಕು. ನಾವು ಮನೆಯಲ್ಲಿ ಕುಳಿತುಕೊಂಡರೆ ಊಟಕ್ಕೆ ಏನು ಮಾಡುವುದು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
- Advertisement -
- Advertisement -
- Advertisement -