24.1 C
Sidlaghatta
Monday, October 27, 2025

ಪಿ.ಎಲ್.ಡಿ.ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆ

- Advertisement -
- Advertisement -

ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಬೆಂಬಲಿತ ೨೦ ಮಂದಿ ಅಭ್ಯರ್ಥಿಗಳು ಗುರುವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಗರದ ರೇಷ್ಮೆ ಗೂಡು ಮಾರುಕಟ್ಟೆಯ ರಸ್ತೆಯಲ್ಲಿರುವ ಪಿ.ಎಲ್.ಡಿ.ಬ್ಯಾಂಕಿನ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬೆಳಗಿನಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು.
ಶಿಡ್ಲಘಟ್ಟ ಟೌನ್ (ಬಿ.ಸಿ.ಎಂ.ಎ) ಅಶ್ವಥ್ಥನಾರಾಯಣ ಟಿ. ೦೧. ಆನೂರು ಕ್ಷೇತ್ರ ಪ.ಜಾ/ಪ.ಪಂ ಬಂಕ್ಮುನಿಯಪ್ಪ ೦೧. ಮೇಲೂರು ಸಾಮಾನ್ಯ ಕ್ಷೇತ್ರ ಎಚ್.ಎಂ.ನಾರಾಯಣಸ್ವಾಮಿ, ೦೧. ಜಂಗಮಕೋಟೆ ಸಾಮಾನ್ಯ ಕ್ಷೇತ್ರ ಕೆ.ಸಿದ್ದಲಿಂಗಪ್ಪ, ಎಂ.ಕೆ. ಬೀಮೇಶ್, ೦೨, ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ ಅಶ್ವಥ್ಥನಾರಾಯಣರೆಡ್ಡಿ, ಅಶ್ವಥ್ಥನಾರಾಯಣರೆಡ್ಡಿ, ೦೨, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ ರಾಮಸ್ವಾಮಿ, ಶಿವಾರೆಡ್ಡಿ, ವೆಂಕಟರೆಡ್ಡಿ, ನಾರಾಯಣಸ್ವಾಮಿ, ಶಿವಾರೆಡ್ಡಿ, ೦೫, ಚೀಮಂಗಲ ಕ್ಷೇತ್ರ ಬಿ.ಸಿ.ಎಂ.ಎ ಸಿದ್ದಪ್ಪ, ಬಿ.ವೆಂಕಟೇಶಪ್ಪ ೦೨, ಗಂಜಿಗುಂಟೆ ಸಾಮಾನ್ಯ ಕ್ಷೇತ್ರ ಚಂದ್ರಶೇಖರೆಡ್ಡಿ. ೦೧, ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರ ರತ್ನಮ್ಮ, ೦೧, ಸಾಲಗಾರರಲ್ಲದ ಕ್ಷೇತ್ರ ಪ್ರಭಾಕರರೆಡ್ಡಿ, ಎಂ.ದೇವರಾಜು, ಲೋಕೇಶ್, ನಾರಾಯಣಸ್ವಾಮಿ, ೦೪, ಒಟ್ಟು ೨೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಳೆದ ಮೂರು ಬಾರಿ ಪಿ.ಎಲ್.ಡಿ. ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಸತತವಾಗಿ ಜಯಗಳಿಸಿದ್ದ ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಂಕ್ಮುನಿಯಪ್ಪ, ಮಾಜಿ ನಿರ್ದೇಶಕ ರಾಯಪ್ಪಲ್ಲಿ ಅಶ್ವಥ್ಥರೆಡ್ಡಿ ಕೂಡಾ ಈ ಬಾರಿಯೂ ಸ್ಪರ್ಧೆಯಲ್ಲಿದ್ದಾರೆ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿರುವ ಈ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!