ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟಿ.ಜಿ.ಟಿ ಶಿಕ್ಷಕರಿಗೆ ವಿಶೇಷ ಭಡ್ತಿ ನೀಡಬೇಕೆಂದು ಶುಕ್ರವಾರ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟಿ.ಜಿ.ಟಿ ಶಿಕ್ಷಕರಿಗೆ ಬಡ್ತಿಯನ್ನು ಅರ್ಹವಿರುವವರಿಗೆ ಮತ್ತು ಒಂಭತ್ತು ತಿಂಗಳ ಬಾಕಿವೇತನವನ್ನು ಮಾರ್ಚಿ 30 ರೊಳಗೆ ಮಾಡಿಸಿಕೊಡಬೇಕು. ನೇಮಕಾತಿ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕ ವೃಂದ 2 ಎಂದೇ ನೇಮಕವಾಗಿದ್ದರೂ ಎಚ್ಆರ್ಎಂಎಸ್ನಲ್ಲಿ ಟಿಜಿಟಿ ಎಂದು ನಮೂದಾಗಿದ್ದು, ಪದನಾಮ ಬದಲಾವಣೆ ಮಾಡಿಕೊಡಬೇಕೆಂದು ಕೋರಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಖಜಾಂಚಿ ಎಂ.ಇಂದಿರಾ, ಎಚ್.ಎಸ್.ರುದ್ರೇಶ್ಮೂರ್ತಿ, ನವೀನ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







