23.1 C
Sidlaghatta
Wednesday, February 18, 2026

ಯುವತಿಯ ಆತ್ಮಹತ್ಯೆ

- Advertisement -
- Advertisement -

ಪ್ರೀತಿ ವಿಫಲವಾಯಿತೆಂಬ ಹತಾಶೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಎ.ಆಶಾದೇವಿ(25) ಮೃತಪಟ್ಟ ದುರ್ಧೈವಿ. ಆಶಾದೇವಿ ಯಣ್ಣಂಗೂರು ಗ್ರಾಮದ ಪ್ರಸನ್ನಕುಮಾರ್‌ ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರ ಮನೆಯಲ್ಲೂ ಮದುವೆಗೆ ಸಮ್ಮತಿಸಿದ್ದರೆನ್ನಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಪ್ರಸನ್ನಕುಮಾರ್‌ ವಿವಾಹವಾಗುವುದಿಲ್ಲವೆಂದು ದೂರವಾಣಿ ಮೂಲಕ ತಿಳಿಸಿದ್ದರಿಂದ ಮನನೊಂದು ಯುವತಿ ಶನಿವಾರ ರಾತ್ರಿ ಧಾನ್ಯಗಳಲ್ಲಿರಿಸುವ ವಿಷಪೂರಿತ ಕಾಳುಗಳನ್ನು ಸೇವಿಸಿದ್ದಾಳೆ. ಇದನ್ನು ಗಮನಿಸಿದ ಮನೆಯವರು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.
ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!