ಶಿಡ್ಲಘಟ್ಟದ ಸಂತೆಮೈದಾನಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ಭೇಟಿ: ಸಂತೆಯಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆ

- Advertisement -
- Advertisement -

ನಗರದ ವಾರದ ಸಂತೆ ಮೈದಾನಕ್ಕೆ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೆಶಕ ಮೇಲೂರು ಮುರಳಿ, ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸಂತೆಯಲ್ಲಿನ ಮೂಲ ಸೌಕರ್ಯ, ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಹಲವಾರು ಸಮಸ್ಯೆಗಳನ್ನು ಮುಂದಿಟ್ಟರು.
ಸಂತೆ ಮೈದಾನದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮನ್ನು ಯಾರೋ ಅತಿಕ್ರಮಿಸಿದ್ದು ಕಂಡು ಗೋದಾಮಿನ ಬೀಗ ಹೊಡೆದು ನೋಡಿದರೆ ಅದರೊಳಗೆ ಅತಿಕ್ರಮದಾರರು ತಮ್ಮ ಸರಕು ಸರಂಜಾಮುಗಳನ್ನು ದಾಸ್ತಾನು ಮಾಡಿದ್ದರು.
ಮದ್ಯಾಹ್ನದೊಳಗೆ ಗೋದಾಮನ್ನು ಖಾಲಿ ಮಾಡುವಂತೆ ಸೂಚಿಸಿ ಇಲ್ಲವಾದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪದಡಿ ಕಾನೂನು ಕ್ರಮ, ದಂಡ ಇನ್ನಿತರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ನಂತರ ಸಂತೆ ಮೈದಾನದಲ್ಲಿ ಸುತ್ತಾಡಿದ ತಂಡಕ್ಕೆ ಸಂತೆಯಲ್ಲಿ ಸ್ವಚ್ಚತೆ, ನೈರ್ಮಲ್ಯದ ಕೊರತೆ, ಶೌಚಾಲಯ ಇಲ್ಲದಿರುವುದು, ಹಂದಿಗಳ ಹಾವಳಿ ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ರೈತರು ಹಾಗೂ ವ್ಯಾಪಾರಸ್ಥರು ಮುಂದಿಟ್ಟರು.
ನಗರಸಭೆ ನಿಗಧಿಪಡಿಸಿದಷ್ಟು ಶುಲ್ಕ ಕಟ್ಟುತ್ತೇವೆ. ಹಾಗೆಯೆ ನಾವು ಕೇಳಿದಂತೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
೧೫ ದಿನಗಳ ಒಳಗೆ ಸಂತೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುತ್ತೇವೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆಯೂ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ ಆಹಾರ ನಿಗದಮ ನಿರ್ದೆಶಕ ನಾಗರಾಜ್, ರಾಜ್ ಕುಮಾರ್, ಶ್ರೀನಾಥ್, ಮಂಜುನಾಥ್ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!