20.1 C
Sidlaghatta
Wednesday, February 11, 2026

ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರಿಂದ ಮನವಿ ಸಲ್ಲಿಕೆ

- Advertisement -
- Advertisement -

ಎನ್.ಪಿ.ಎಸ್ ನೌಕರರ ಸರ್ಕಾರಿ ಬ್ಯಾಕ್‌ಲಾಗ್ ವಂತಿಗೆಗೆ ಸಂಬಂಧಿಸಿದಂತೆ ಎನ್.ಪಿ.ಎಸ್ ಘಟಕಕ್ಕೆ ಮಾಹಿತಿ ಸಲ್ಲಿಸಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರು ಪೇಟೆ ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, 2006 ರ ಏಪ್ರಿಲ್‌ 1 ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಯೋಜನೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ವೇತನ ಬಟವಾಡೆ ಹಂತದಲ್ಲಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸಿಲ್ಲ. ಬ್ಯಾಕ್‌ಲಾಗ್ ಪಾವತಿಗೆ ಬಾಕಿ ಇರುವ ನೌಕರರ ಪಟ್ಟಿ ಹಾಗೂ ಇನ್ನಿತರೆ ಎನ್.ಪಿ.ಎಸ್.ಗೆ ಸಂಭಂದಿಸಿದಂತೆ ಇರುವ ಅಡಚಣೆಗಳನ್ನು ನಿವಾರಿಸಬೇಕೆಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರು ನೌಕರರ ಭವಿಷ್ಯದ ವಿಷಯವಾಗಿ ಸರ್ಕಾರ ಎನ್.ಪಿ.ಎಸ್ ಯೋಜನೆ ಜಾರಿ ಮಾಡಿದ್ದು, ಯಾವುದೇ ರೀತಿಯ ಸಹಾಯ ಮಾಡಲು ಬೇಕಾದರೂ ಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಸಿ.ಎಂ,ಮುನಿರಾಜು, ಬಿ.ವಿ.ಶ್ರೀರಾಮಯ್ಯ, ತನ್ವೀರ್ ಅಹಮದ್‌, ವೀಣಾ, ಪಿಳ್ಳಣ್ಣ, ಎಸ್,ಎ.ನರಸರಾಜು, ಸುದರ್ಶನ್, ಅರುಣ್, ಜಗದೀಶ್, ಜಿ.ಕೆ.ಸುಧಾ, ಜನಾರ್ದನ್, ಸುರೇಶ್ ಚಂದ್ರಿಕಾ, ಚಂದ್ರಕಲಾ ಮತ್ತಿತರರು ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!