17.1 C
Sidlaghatta
Sunday, December 28, 2025

ಸಾರಿಗೆ ಬಸ್‌ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮವನ್ನು

- Advertisement -
- Advertisement -

ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವವರಿಗೆ ದಂಡ ವಿಧಿಸಬೇಕೆಂಬ ಕಾನೂನನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ರಾಘವೇಂದ್ರ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಬಸ್‌ ನಿಲ್ದಾಣದಲ್ಲಿ ಸಂಘಟನೆಯ ಸದಸ್ಯರೊಂದಿಗೆ ಸೇರಿ ಗುರುವಾರ ಪೊರಕೆಗಳನ್ನಿಡಿದು ಸ್ವಚ್ಛಗೊಳಿಸಿ ಅವರು ಮಾತನಾಡಿದರು. ನಮ್ಮ ಸಂಘಟನೆಯ ತಾಲ್ಲೂಕು ಘಟಕದ ಸದಸ್ಯರ ನೇಮಕ ಮಾಡಲು ಬಂದಾಗ ಬಸ್‌ ನಿಲ್ದಾಣ ಹಾಗೂ ಸುತ್ತ ಮುತ್ತ ಬೀಡಿ, ಸಿಗರೇಟ್‌, ಬಾಟಲ್‌, ಪಾನ್‌ ಪೊಟ್ಟಣಗಳ ತ್ಯಾಜ್ಯಗಳನ್ನು ಕಂಡು ಬೇಸರವಾಯಿತು. ಒಂದೆಡೆ ಜನರಲ್ಲಿ ನಮ್ಮ ಊರು, ನಮ್ಮ ಬಸ್‌ ನಿಲ್ದಾಣ ಎಂಬ ಧೋರಣೆ ಇಲ್ಲದಿರುವುದು ಕಂಡರೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾಣಿಸಿತು. ನಮ್ಮ ಸಂಘಟನೆಯ ಸದಸ್ಯರೇ ಈ ದಿನ ಬಸ್‌ ನಿಲ್ದಾಣವನ್ನು ಶುಭ್ರಗೊಳಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಸಿದರು.
ಜಯ ಕರ್ನಾಟಕ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ, ಕಾರ್ಯದರ್ಶಿ ಸುಬ್ರಮಣ್ಯಾಚಾರಿ, ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಛಲಪತಿ, ಶಶಿಕುಮಾರ್‌, ನಿಜಾಮ್‌, ಕೃಷ್ಣಾರೆಡ್ಡಿ, ವೆಂಕಟೇಶ, ದೀಪು, ವಿನೋದ್‌್, ನಾಸಿರ್‌, ನವೀನ್‌, ಮಹೇಶ್‌, ಚಂದ್ರು, ಜಗದೀಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!