19.1 C
Sidlaghatta
Saturday, December 27, 2025

ನಗರಸಭೆಯ ಸಾಮಾನ್ಯ ಸಭೆ

- Advertisement -
- Advertisement -

ಯುಜಿಡಿ ನೀರನ್ನು ಹರಾಜಿನಲ್ಲಿ ಪಡೆದಿದ್ದ ಹಿತ್ತಲಹಳ್ಳಿ ರಮೇಶ್ ಎರಡು ಲಕ್ಷ 10 ಸಾವಿರ ಬಾಕಿಯಿದ್ದು, ಅವರು ನೀಡಿದ್ದ ಚೆಕ್ ಬೌನ್ಸ್ ಆದ ಕಾರಣ ಪ್ರಕರಣವನ್ನು ದಾಖಲಿಸುವುದಾಗಿ ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಫೆಬ್ರುವರಿ 26 ರಂದು ಖಾಸಗಿ ಬಸ್ ನಿಲ್ದಾಣ, ದಿನವಹಿ ಮಾರುಕಟ್ಟೆಗಳ ಶುಲ್ಕ, ನಿರುಪಯುಕ್ತ ವಸ್ತುಗಳು ಹಾಗೂ ಯುಜಿಡಿ ನೀರನ್ನು ಹರಾಜು ಹಾಕುವುದಾಗಿ ಅವರು ಸಭೆಗೆ ಮಾಹಿತಿ ನೀಡಿದರು.
ನಗರಸಭೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಎಂಜಿನಿಯರ್ ಇದ್ದು ಅವರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಅವರು ಬರುವುದು ಹೋಗುವುದು ನಗರಸಭೆಯ ಸದಸ್ಯರಿಗೆ ತಿಳಿಯದಾಗಿದೆ. ಕೇವಲ ಸಂಬಳ ತೆಗೆದುಕೊಂಡು ಹೋಗಲು ಬರುವ ಅಧಿಕಾರಿಗಳು ನಮಗೆ ಬೇಕಿಲ್ಲ ಎಂದು ನಗರಸಭೆ ಸದಸ್ಯ ರಾಘವೇಂದ್ರ ಅಧಿಕಾರಿಗಳು ಕೆಲಸ ಮಾಡದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.
ಸದಸ್ಯ ನಂದಕಿಶನ್ ಮಾತನಾಡಿ, ನಗರದಲ್ಲಿ ಬಿಪಿಎಲ್ ಕುಟುಂಬಗಳು ಹೆಚ್ಚಾಗಿದ್ದಾವೆ. ಸೀಮೆ ಎಣ್ಣೆ ಸ್ಥಗಿತಗೊಂಡಿರುವುದರಿಂದ ವಿವಿಧ ಅನುದಾನಗಳಲ್ಲಿ ಉಳಿಕೆ ಹಣದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಿ. ಇದರಿಂದ ಹೊಗೆಮುಕ್ತ ನಗರವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ನಗರ ವ್ಯಾಪ್ತಿಯಲ್ಲಿ ಹಾಳಾದ ರಸ್ತೆ ದುರಸ್ತಿ, ರಸ್ತೆ ನಿರ್ಮಾಣದಲ್ಲಿ ಮುಚ್ಚಿಹೋದ ಯುಜಿಡಿ ಚೇಂಬರುಗಳ ತೆರವೀಕರಣ ಹಾಗೂ ಮುಂದೆ ನಡೆಸುವ ಯೋಜನೆಗಳ ಬಗ್ಗೆ ಸದಸ್ಯರು ಚರ್ಚಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!