27.1 C
Sidlaghatta
Sunday, October 26, 2025

ಹಾಲು ಉತ್ಪಾದಕರಿಗೆ ಚೆಕ್ ವಿತರಣೆ

- Advertisement -
- Advertisement -

ತೀವ್ರ ಮಳೆಯ ಅಭಾವ ಹಾಗೂ ಮೇವುಗಳ ಕೊರತೆಯಲ್ಲಿಯೂ ಕೂಡಾ ಉತ್ತಮ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಗುಣಮಟ್ಟವನ್ನು ಕಾಪಾಡಲು ಎಲ್ಲಾ ಹಾಲು ಉತ್ಪಾದಕರು ಸಹಕಾರ ನೀಡಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಹಾಲು ಉತ್ಪಾದಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಗುಣಟಮಟ್ಟವನ್ನು ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ, ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ ೨೨ ಫಲಾನುಭವಿಗಳಿಗೆ ರಾಸು ವಿಮಾ ಚೆಕ್ಗಳನ್ನು, ೧೮ ಸಂಘಗಳಿಗೆ ಕಟ್ಟಡ ಅನುದಾನದ ಚೆಕ್ಗಳನ್ನು ಹಾಗೂ ಎಸ್.ಜಿ.ಎಸ್.ವೈ ಯೋಜನೆಯಲ್ಲಿ ೨೮ ಸಂಘಗಳಿಗೆ ತಲಾ ಎರಡು ಸ್ಟೀಲ್ ಕ್ಯಾನುಗಳನ್ನು ವಿತರಿಸಲಾಗುತ್ತಿದ್ದು, ಟ್ರಸ್ಟ್ವತಿಯಿಂದ ನೀಡುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಂಘಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕಿನ ಒಟ್ಟು ೧೯೨ ಸಂಘಗಳ ಪೈಕಿ ೧,೧೫,೦೦೦ ಲೀಟರ್ ಹಾಲು ಶೇಖರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸಂಘಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿಯಮಿತವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಶಿಬಿರದ ಉಪವ್ಯವಸ್ಥಾಪಕ ಹನುಮಂತರಾವ್, ಬೈರರೆಡ್ಡಿ, ಶ್ರೀನಿವಾಸ್, ಉಮೇಶ್ರೆಡ್ಡಿ, ನಾರಾಯಣರೆಡ್ಡಿ, ಅಮರೇಶ್ ಮುಂತಾದವರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!