ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀ ಗಂಗಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಶ್ರೀ ಗಂಗಮ್ಮದೇವಿ ಗೆಳೆಯರ ಬಳಗ ಗುರುವಾರ ಸಂಜೆ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ತಂಡ, ಜಸ್ಮಿತ್ ಡ್ಯಾನ್ಸ್ ಅಕಾಡೆಮಿ ತಂಡ ಮತ್ತು ಸಿ.ಎನ್.ಮುನಿರಾಜ್ ನೃತ್ಯ ಪ್ರದರ್ಶನ ನಡೆಸಿಕೊಟ್ಟರೆ, ದೇವರಮಳ್ಳೂರು ಮಹೇಶ ಹಾಗೂ ತಂಡ ಗೀತಗಾಯನವನ್ನು ನಡೆಸಿಕೊಟ್ಟರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಲನಚಿತ್ರ ನಟಿ ಗೀತಪ್ರಿಯ ಮಾತನಾಡಿ, “ಕಲೆಗೆ ಪ್ರೋತ್ಸಾಹ ಅತ್ಯಗತ್ಯ. ಸ್ಥಳೀಯ ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಪ್ರೇಕ್ಷಕರ ಚಪ್ಪಾಳೆ, ಬೆಂಬಲ ಕಲಾವಿದ ಬೆಳೆಯಲು ಅತ್ಯಗತ್ಯ. ಒಬ್ಬರ ಬೆಳವಣಿಗೆ ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯರಿಗೆ ಅವಕಾಶ ನೀಡುತ್ತಿರುವುದು ಖುಷಿ ಕೊಡುವ ಸಂಗತಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದ ತಂಡದವರನ್ನು ಸನ್ಮಾನಿಸಿದರು. ನೃತ್ಯ ಪಟುಗಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿದರು.
ಎಂ.ಪಿ.ಸಿ.ಎಸ್ ಅಧ್ಯಕ್ಷ ಬಿ.ಎಲ್.ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ನಿರಂಜನ್, ಶ್ರೀನಿವಾಸ್, ವೆಂಕಟೇಶಪ್ಪ, ಸೊಣ್ಣಪ್ಪ, ಗಂಗಾಧರ, ಶ್ರೀ ಗಂಗಮ್ಮ ದೇವಿಯ ಗೆಳೆಯರ ಬಳಗದ ಆಂಜನಪ್ಪ, ಶ್ರೀನಿವಾಸ್ ,ವೆಂಕಟರೆಡ್ಡಿ, ಮನೋಹರ್, ಗಗನ್, ಅನಿಲ್ ಕುಮಾರ್, ನರಸಿಂಹಪ್ಪ, ಸುನಿಲ್, ಕೇಶವ, ಪ್ರದೀಪ್, ಚಂದ್ರಪ್ಪ, ಅನಿಲ್, ಸತೀಶ್, ಸಂತೋಷ್, ಹರೀಶ್, ಕಿರಣ್, ರವಿ, ನವೀನ್, ಅನಿಲ್, ಶ್ರೀರಾಮ್, ಗಂಗಾಧರ್, ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ಮನೋಜ್, ಸುಬ್ಬು, ಶ್ರೀನಿವಾಸ್, ಜಸ್ಮಿತ್ ಡ್ಯಾನ್ಸ್ ಅಕಾಡೆಮಿಯ ಧನುಶ್ರೀ, ಅಭಿರಾಮ್ ಹಾಜರಿದ್ದರು.
- Advertisement -
- Advertisement -
- Advertisement -