23.1 C
Sidlaghatta
Sunday, October 26, 2025

ಹಾಡಹಗಲೇ ಕಳ್ಳತನ

- Advertisement -
- Advertisement -

ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹಾಡಹಗಲೇ ದ್ವಿಚಕ್ರವಾಹನವೊಂದು ಕಳುವಾಗಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ದೊಗರನಾಯಕನಹಳ್ಳಿ ಗ್ರಾಮದ ಚನ್ನಕೇಶವ ಎಂಬುವವರಿಗೆ ಸೇರಿದ ಕೆಎ 40, ಕ್ಯೂ 1200 ಸಂಖ್ಯೆಯ ದ್ವಿಚಕ್ರ ವಾಹನವು ಭಾನುವಾರ ಹಾಡ ಹಗಲಲ್ಲೇ ಕಳುವಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು ಪರಿಚಯಸ್ಥರೊಬ್ಬರನ್ನು ನೋಡಲೆಂದು ಬಂದಿದ್ದ ಸಂದರ್ಭದಲ್ಲಿ ದ್ವಿ ಚಕ್ರ ವಾಹನ ಕಳುವಾಗಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆಸ್ಪತ್ರೆಯ ಆವರಣ ಸೇರಿದಂತೆ ನಗರದ ವಿವಿದೆಡೆ ದ್ವಿಚಕ್ರ ವಾಹನಗಳು ಕಳುವಾಗುತ್ತಿದ್ದರೂ ಪೋಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ನಾಗರೀಕರಲ್ಲಿ ಬೇಸರ ಮೂಡಿಸಿದೆ.
ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಳುವಾದ ಬೈಕ್ ಮಾಲೀಕರು ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!