ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಗಣೇಶನ ಹಬ್ಬ ಆಚರಣೆ

- Advertisement -
- Advertisement -

ತಾಲ್ಲೂಕಿನಾದ್ಯಂತ ಗಣೇಶನ ಹಬ್ಬವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮನೆಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪೂಜಿಸುವುದಲ್ಲದೆ, ಪ್ರತಿಯೊಂದು ಹಳ್ಳಿಯಲ್ಲಿ, ವಿವಿಧ ಬೀದಿಗಳಲ್ಲಿ, ದೇವಾಲಯಗಳಲ್ಲಿ, ಸಂಘಟನೆಗಳ ಮೂಲಕ, ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆಯನ್ನು ಸಲ್ಲಿಸಲಾಯಿತು. ಕೆಲವೆಡೆ ಪರಿಸರ ಪ್ರೀತಿಯನ್ನು ಮೆರೆದು ಬಣ್ಣಗಳಿಲ್ಲದ ಪರಿಸರ ಗಣಪನನ್ನು ಪ್ರತಿಷ್ಠಾಪಿಸಿದ್ದರೆ, ಕೆಲವರು ಐದು ಅಡಿಗೂ ಎತ್ತರದ ಗಣಪನನ್ನು ಪ್ರತಿಷ್ಠಾಪಿಸಿದ್ದರು. ನಂದಿವಾಹನ ಗಣಪತಿ, ಕೊಳಲು ಊದುವ ಗಣಪತಿ, ಕೈಲಾಸದಲ್ಲಿರುವ ಗಣಪತಿ ಹೀಗೆ ನಾನಾ ರೀತಿಯ ಗಣಪನ ಮೂರ್ತಿಗಳನ್ನು ವಿಶೇಷವಾಗಿ ಮಾಡಿಸಿಕೊಂಡಿದ್ದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಪರಿಸರ ಪ್ರೀತಿಯನ್ನು ಮೆರೆದಿರುವ ಗ್ರಾಮಸ್ಥರು ರಾಸಾಯನಿಕ ಬಣ್ಣಗಳನ್ನು ಬಳಸದಿರುವ ಮಣ್ಣಿನ ಗಣಪನನ್ನು ಪೂಜಿಸಿದ್ದರೆ, ವೀರಾಪುರ ಗ್ರಾಮದ ವರಸಿದ್ಧಿ ಗಣೇಶನಿಗೆ ಬೆಣ್ಣೆಯ ಅಲಂಕಾರ ಮತ್ತು ಕರ್ಜೀಕಾಯಿ ಹಾರವನ್ನು ಹಾಕಿ ಪೂಜಿಸಲಾಯಿತು. ಕೆ.ಮುತ್ತುಗದಹಳ್ಳಿಯಲ್ಲಿ ಆರು ಅಡಿ ಎತ್ತರದ ಗಣೇಶನನ್ನು, ಪಟ್ಟಣದ ದೊಂತಿ ಛತ್ರದಲ್ಲಿ ಕೊಳಲೂದುವ ಗಣೇಶ, ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸಿಂಹಾಸನಾರೂಢ ಗಣೇಶ, ಗೌಡರಬೀದಿಯ ಕೈಲಾಸ ಗಣಪತಿ, ಮಳ್ಳೂರು ಸಾಯಿಬಾಬಾ ದೇವಾಲಯದ ಅಲಂಕೃತ ಗಣಪತಿ, ದೇಶದಪೇಟೆಯ ಗೌರಿಗಣಪತಿ, ಕೆಕೆ ಪೇಟೆಯ ಶೇಷಶಯನ ಗಣಪತಿ, ಉಲ್ಲೂರುಪೇಟೆ ವೀರಾಂಜನೇಯಸ್ವಾಮಿ ದೇವಾಲಯದ ದೊಡ್ಡಗಣಪ, ದೇಶದಪೇಟೆಯ ಆಂಜನೇಯಸ್ವರೂಪಿಯಾಗಿ ರಾಮ ಲಕ್ಷ್ಮಣರನ್ನು ಹೊತ್ತ ಗಣಪ, ಅಗ್ರಹಾರಬೀದಿಯ ಪೇಟ ಕಟ್ಟಿರುವ ಗಣೇಶ ಹೀಗೆ ನಾನಾ ಗಣಪತಿಗಳು ತಾಲ್ಲೂಕಿನಾದ್ಯಂತ ಅವತರಿಸಿದ್ದಾರೆ.
ಎಲ್ಲೆಡೆ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯುತ್‌ ದೀಪಗಳ ಅಲಂಕಾರಗಳು, ಪ್ರಸಾದ ವಿತರಣೆಗಳು ನಡೆಯುತ್ತಿವೆ. ಬಹಳಷ್ಟು ಕಡೆ ಯುವಕರು, ಮಕ್ಕಳು ಹಣ ಸಂಗ್ರಹಿಸಿ ಕೂಡಿಟ್ಟು ತಂದು ಸ್ಥಾಪಿಸಿರುವ ಗಣೇಶನೊಂದಿಗೆ ತಮ್ಮ ಪ್ರತಿಭೆಯನ್ನೂ ಅನಾವರಣಗೊಳಿಸುತ್ತಿದ್ದಾರೆ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!