24.1 C
Sidlaghatta
Thursday, April 18, 2024

ಕನ್ನಡ ಭಾಷೆ ಅಳಿವು ಉಳಿವು ನಮ್ಮ ಕೈಯಲ್ಲಿದೆ

- Advertisement -
- Advertisement -

ಕನ್ನಡ ಭಾಷೆ ಅಳಿವು ಉಳಿವಿನ ಪ್ರಶ್ನೆ ನಮ್ಮ ಕೈಯಲ್ಲಿಯೇ ಇದೆ ಹೊರತು ಸರ್ಕಾರಗಳ ಕೈಯಲ್ಲಲ್ಲ. ಭಾಷೆ ಉದ್ಧಾರವಾಗಲು ಪ್ರತಿ ಹಂತದಲ್ಲೂ ಜನ ಕನ್ನಡ ಬಳಸಬೇಕು, ಭಾಷೆ ಹಿರಿಮೆಯನ್ನು ಮೆರೆಸಬೇಕು. ಆಗ ಜಯ ಕನ್ನಡಿಗರದಾಗುತ್ತದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎರಡನೇ ಹಂತದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹರಿದು ಹಂಚಿಹೋಗಿದ್ದ ರಾಜ್ಯವನ್ನು ಏಕೀಕರಣಗೊಳಿಸಿದ ಹಲವಾರು ಮಹಾನುಭಾವರು ಸ್ಮರಣೀಯರು. ಅವರೆಲ್ಲರ ತ್ಯಾಗ, ಶ್ರಮ, ಹೋರಾಟವನ್ನು ನೆನೆಯಬೇಕು. ನಮ್ಮ ಭಾಷೆಯ ಬಗ್ಗೆ ಸದಾ ಅಭಿಮಾನಿಗಳಾಗಬೇಕು. ಕನ್ನಡ ದಿನಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಸಂಸ್ಕಾರ ರೂಢಿಯಾಗಬೇಕು ಎಂದು ಹೇಳಿದರು.
ಕನ್ನಡ ಭಾಷೆ, ರಾಜ್ಯದ ಭೌಗೋಳಿಕ ವಿಸ್ತಾರ, ಏಕೀಕರಣ, ಇತಿಹಾಸ, ದಾಖಲೆ, ಪ್ರಶಸ್ತಿಗಳು, ಏಕೀಕರಣ ಹೋರಾಟ, ಕಸಾಪ ನಡೆದು ಬಂದ ದಾರಿ, ಭಾಷೆ ಅಂದು ಇಂದು ಮುಂದೆ ಬಾಷೆ ಉಳಿಯಲು ಮಾಡಬೇಕಾದ ಕೆಲಸಗಳು ಮುಂತಾದವುಗಳನ್ನು ವಿವರಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆನಂದ್ ‘ತೋಟಗಾರಿಕೆಯಲ್ಲಿ ವಾಣಿಜ್ಯೀಕರಣ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಎ.ಎಂ.ತ್ಯಾಗರಾಜ್, ಉಮಾ ಚನ್ನೇಗೌಡ, ವಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮುನಿರಾಜು, ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!