ನಗರದ ಆಸುಪಾಸಿನಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ನಡೆಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಮಂಗಳವಾರ ಶಾಸಕರ ಅನುದಾನದಲ್ಲಿ ಕೊಳವೆ ಬಾವಿಯನ್ನು ಕೊರೆಸಲು ಹಾಗೂ ವಿವಿಧ ಕಾಮಗಾರಿಗಳ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲ ಕಾಮಗಾರಿಗಳನ್ನು ಈಗ ಶಾಸಕರ ಸ್ಥಳೀಯ ಅಭಿವೃದ್ಧಿ ಕೈಗೆತ್ತುಕೊಂಡಿದ್ದು, ಸುಮಾರು 12 ಲಕ್ಷ ರೂಗಳ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ನಗರದ ಆಸುಪಾಸಿನಲ್ಲಿ ಅಗತ್ಯವಿರುವ ಎಲ್ಲಾ ಕೆಲಸಗಳನ್ನೂ ಮಾಡಿಸುವುದಾಗಿ ಹೇಳಿದರು. ಕೊಳವೆ ಬಾವಿಯಲ್ಲಿ ಸಿಗುವ ನೀರು ಸಮುದಾಯಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಖಬರ್ಸ್ತಾನ್ಗೆ ಮೂರು ಹಂತದಲ್ಲಿ ಕಾಂಪೋಂಡ್ ನಿರ್ಮಾಣ, ತಾಲ್ಲೂಕಿನ ಬೆಳ್ಳೂಟಿ ಗೇಟ್ ಹತ್ತಿರ ಹಜರತ್ ಗೌಶಾವಲಿ ದರ್ಗಾದ ಮುಂಭಾಗದಲ್ಲಿ ಕಾಂಪೋಂಡ್, ಗೇಟ್, ಆರ್ಚ್ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಪೂಜೆಯನ್ನು ನೆರವೇರಿಸಲಾಯಿತು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಆದಿಲ್ ಪಾಷ, ಮುಷ್ಟಾಕ್ ಅಹ್ಮದ್, ರಹಮತ್ತುಲ್ಲ, ಮಹಮ್ಮದ್ ಅಲಿ, ದೊಣ್ಣಹಳ್ಳಿ ರಾಮಣ್ಣ, ಸಲಾಂ, ಸೊಣ್ಣೇಗೌಡ, ಚಾಂದ್ಪಾಷ, ಷಫಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -