ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ವೈಧಿಕ ನಾರಾಯಣಸ್ವಾಮಿಯವರು ಮಕ್ಕಳ ಕೈಗೆ ತೊಡಿಸಿದ ಮಂತ್ರಿಸಿದ ಬಳೆಯಿಂದ ಇಬ್ಬರು ಮಕ್ಕಳು ಸತ್ತಿದ್ದಾರಂತೆ, ಅಲ್ಲಿ ಇನ್ನೂ ಮೂವರು ಸತ್ತರಂತೆ ಎಂಬ ಅಂತೆ ಕಂತೆಗಳು ಹರಿದಾಡಿ ಮಂಗಳವಾರ ತಾಲ್ಲೂಕಿನಲ್ಲಿ ಆತಂಕ ಸೃಷ್ಠಿಯಾಗಿತ್ತು.
ತಾಲ್ಲೂಕಿನ ಮೇಲೂರು ಗ್ರಾಮದ ವೈಧಿಕ ಲಕ್ಷ್ಮೀನಾರಾಯಣ್ ಎಂಬುವವರು ಮಂತ್ರಿಸಿದ ಬಳೆ ಧರಿಸಿದ ಮಕ್ಕಳು ಸತ್ತು ಹೋದರಂತೆ ಎಂಬ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಿಡಿದ್ದು ಪೋಷಕರು ಆತಂಕಕ್ಕೊಳಗಾಗುವಂತಾಯಿತು.
ಮದ್ಯಾಹ್ನದ ವೇಳೆಗೆ ಸುದ್ದಿಯು ಒಬ್ಬರಿಂದ ಒಬ್ಬರಿಗೆ ಹರಡಿತ್ತಲ್ಲದೆ, ಕೂಡಲೆ ಬಳೆಗಳನ್ನು ತೆಗೆದು ಬಿಸಾಡಿ ಎಂದು ಪ್ರಚಾರ ನಡೆದಿತ್ತು. ಇನ್ನು ಕೆಲವು ಕಡೆ ವೈಧಿಕರು ಹಾಗೂ ಅವರ ಮೂವರು ಮಕ್ಕಳು ಸಹ ಒಬ್ಬರ ನಂತರ ಒಬ್ಬರು ಸತ್ತರಂತೆ ಎಂಬ ಅಂತೆ ಕಂತೆಗಳ ಸುದ್ದಿ ಹರಿದಾಡಿದ್ದು ಕೆಲವೇ ಗಂಟೆಗಳಲ್ಲಿ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆ, ನೆರಯ ಆಂಧ್ರ, ತಮಿಳುನಾಡಿನಲ್ಲೂ ಸುದ್ದಿ ಸದ್ದು ಮಾಡಿತ್ತು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳ ಕೈಯ್ಯಲ್ಲಿ ಧರಿಸಿದ್ದ ತಾಮ್ರದ ಬಳೆಗಳನ್ನು ಕಿತ್ತು ಬಿಸಾಡಿದ್ದಾರೆ, ಇನ್ನೂ ಕೆಲವು ಕಡೆ ಪೋಷಕರು ಗುಂಪು ಗುಂಪಾಗಿ ಶಾಲೆಗಳಿಗೆ ದೌಡಾಯಿಸಿ ಬಂದು ತಮ್ಮ ಮಕ್ಕಳ ಕೈಯ್ಯಲ್ಲಿನ ಬಲೆಯನ್ನು ತೆಗೆದು ನಿಟ್ಟುಸಿರು ಬಿಟ್ಟಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಿಡಿದ್ದು ತಮ್ಮ ಬಂಧು ಬಳಗ ನೆಂಟರು ಅಕ್ಕ ಪಕ್ಕದವರಿಗೆ ಮಕ್ಕಳ ಕೈಯ್ಯಲ್ಲಿ ಬಳೆ ಬಿಸಾಡಿ ಎಂದು ತಾಕೀತು ಮಾಡಿದ್ದಾರೆ. ಇಷ್ಟಕ್ಕೂ ಸಮಾಧಾನವಾಗದೆ ಕೆಲವರು ನೇರವಾಗಿ ಮೇಲೂರಿನ ವೈಧಿಕರ ಮನೆಗೆ ದೌಡಾಯಿಸಿದ್ದಾರೆ.
ನೋಡ ನೋಡುತ್ತಿದ್ದಂತೆ ವೈಧಿಕ ಲಕ್ಷ್ಮೀನಾರಾಯಣರ ಮನೆ ಮುಂದೆ ಜನಜಂಗುಳಿಯೆ ನೆರೆದಿತ್ತು. ಲಕ್ಷ್ಮೀನಾರಾಯಣಸ್ವಾಮಿಗಳಿಗಿಂತೂ ಬಂದ ಎಲ್ಲರಿಗೂ ನಾನು ಬದುಕಿದ್ದೇನೆ, ನಮ್ಮ ಮಕ್ಕಳು ಬದುಕಿದ್ದಾರೆ, ನಾನು ಬಳೆ ತೊಡಿಸಿದ ಎಲ್ಲ ಮಕ್ಕಳೂ ಕ್ಷೇಮವಾಗಿದ್ದಾರೆ. ಯಾರಿಗೂ ಏನೂ ಆಗಿಲ್ಲ, ಇದೆಲ್ಲವೂ ವದಂತಿಗಳು ಅಷ್ಟೇ ಎಂದು ಹೇಳಿ ಹೇಳುವಷ್ಟರಲ್ಲಿ ಸಾಕು ಸಾಕಾಯಿತು.
ಅಂತೂ ಇಂತೂ ರಾತ್ರಿಯವರೆಗೂ ಹರಿದಾಡಿದ ಗಾಳಿ ಸುದ್ದಿಯಿಂದ ವೈಧಿಕ ಲಕ್ಷ್ಮೀನಾರಾಯಣರ ಬಳಿ ಬಳೆ ತೊಡಿಸಿಕೊಂಡು ಹೋಗಿದ್ದ ಲಕ್ಷಾಂತರ ಮಂದಿ ಪೋಷಕರು ಇನ್ನಿಲ್ಲದ ಆತಂಕಕ್ಕೆ ಒಳಗಾಗಿ ತಮ್ಮ ಮಕ್ಕಳ ಕೈಯ್ಯಲ್ಲಿನ ಬಳೆಯನ್ನು ಕಿತ್ತೆಸೆದು ಕೊನೆಗೂ ಇದೆಲ್ಲಾ ಸುಳ್ಳು ಎಂದು ತಿಳಿದ ಮೇಲಷ್ಟೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಯಿತು.
ಮೇಲೂರಿನಲ್ಲಿ ಮಕ್ಕಳ ಕೈ ಬಳೆಯ ವದಂತಿ: ಆತಂಕಕ್ಕೆ ಬಿದ್ದ ಪೋಷಕರು: ಮಕ್ಕಳ ಕೈಯ್ಯಲ್ಲಿನ ಹಿತ್ತಾಳೆಯ ಬಳೆ ಕಿತ್ತೆಸೆದ ಪೋಷಕರು
- Advertisement -
- Advertisement -
- Advertisement -







