23.1 C
Sidlaghatta
Saturday, July 19, 2025

ಶಾಲೆಯ ವಿದ್ಯಾರ್ಥಿಗಳಿಗೆ ಕಾಡಿನ ಪರಿಚಯ

- Advertisement -
- Advertisement -

ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶನಿವಾರ ತಮ್ಮ ಗ್ರಾಮದ ಹತ್ತಿರವಿರುವ ಬಚ್ಚನಹಳ್ಳಿ ಕಾಡಿನಲ್ಲಿ ಹೊರಸಂಚಾರ ಕೈಗೊಂಡಿದ್ದರು.
ವಿವಿಧ ರೀತಿಯ ಮರಗಿಡಗಳು, ಚಿಟ್ಟೆ, ಹಕ್ಕಿಗಳು, ಕಾಡು ಹಣ್ಣುಗಳ ಪರಿಚಯವನ್ನು ಶಿಕ್ಷಕರ ಸಹಾಯದಿಂದ ಮಾಡಿಕೊಂಡು ಆಡಿ ನಲಿದರು.
‘ತಾಲ್ಲೂಕಿನ ಬಚ್ಚನಹಳ್ಳಿ ಕಾಡಿನಲ್ಲಿ ಸುಮಾರು 700 ವರ್ಷಗಳ ಹಿಂದಿನ ಗೋಪಮ್ಮ ದೇವಾಲಯವಿದೆ. ದನಕರುಗಳು, ಕುರಿ ಮೇಕೆಗಳಿಗೆ ಅನಾರೋಗ್ಯವಾದಾಗ ಇಲ್ಲಿ ಬಂದು ಹರಕೆ ಮಾಡಿಕೊಂಡರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಗ್ರಾಮೀಣರದ್ದು. ಈ ದೇವಾಲಯದ ಬಳಿ ಮಕ್ಕಳಿಗೆ ಶ್ಲೋಕ, ಬೌದ್ಧ, ಜೈನ, ಕುರಾನ್, ಬೈಬಲ್ ಪ್ರಾರ್ಥನೆಯನ್ನು ಪಠಣೆ ಮಾಡಿಸಿದೆವು. ವಿವಿಧ ಆಟಗಳನ್ನು ಆಡಿಸಿದೆವು. ಹುಲಿಎಲೆಕಾಯಿ, ನೇರಳೆ ಹಣ್ಣು ಮುಂತಾದವುಗಳನ್ನು ತಿಂದು ಮಕ್ಕಳು ಸಂಭ್ರಮಿಸಿದರು. ನಿಸರ್ಗದ ನಡುವೆ ಮಕ್ಕಳೊಂದಿಗೆ ಶಿಕ್ಷಕರೂ ಮಕ್ಕಳಂತಾಗಿದ್ದೆವು’ ಎಂದು ಶಿಕ್ಷಕ ವೆಂಕಟರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗಲಪ್ಪ ಮತ್ತು ಮುರಳಿ ಶಾಲಾ ಮಕ್ಕಳಿಗೆ ಉಪಹಾರ ವಿತರಿಸಿದರು. ಶಾಲಾ ಮುಖ್ಯಶಿಕ್ಷಕ ಎಸ್.ಎಂ. ಆದಿನಾರಾಯಣ, ಶಿಕ್ಷಕರಾದ ರಾಮರೆಡ್ಡಿ, ಮಂಜುನಾಥ, ಗಜೇಂದ್ರ, ಲಲಿತಾ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!