ಶಾಶ್ವತ ನೀರಾವರಿಗಾಗಿ ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಹಂಡಿಗನಾಳ ಗ್ರಾಮಸ್ಥರು ಬೈಕ್ ರ್ಯಾಲಿಯ ಮೂಲಕ ಬುಧವಾರ ತೆರಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿದ ಗ್ರಾಮಸ್ಥರು ನಗರದ ಬಸ್ ನಿಲ್ದಾಣದಿಂದ ಸಾಗಿ ತಲ್ಲೂಕು ಕಚೇರಿಯವರೆಗೂ ಸಾಗಿದೆರು.
ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹಂಡಿಗನಾಳ ಗ್ರಾಮದ ನಾಗರಿಕರು, ಯುವಕರು, ಪರಮಶಿವಯ್ಯನವರ ಶಾಶ್ವತ ನೀರಿನ ಯೋಜನೆ ಜಾರಿಯಾಗುವವರೆಗೂ ನಡೆಯುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತೇವೆ. ನೀರಿನ ಅಗತ್ಯತೆಯ ಅರಿವು ಆಢಳಿತ ನಡೆಸುವ ಜನಪ್ರತಿನಿಧಿಗಳಿಗೆ ಆಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು. ನಂತರ ಹಂಡಿಗನಾಳ ಗ್ರಾಮಸ್ಥರು ಅನಿರ್ಧಿಷ್ಠ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಬೈಕ್ ರ್ಯಾಲಿಯ ಮೂಲಕ ತೆರಳಿದರು.
- Advertisement -
- Advertisement -
- Advertisement -
- Advertisement -