24.1 C
Sidlaghatta
Saturday, April 20, 2024

ಶುದ್ಧ ನೀರಿನ ಘಟಕ ನಿರ್ಮಾಣಕ್ಕೂ ರಾಜಕೀಯ

- Advertisement -
- Advertisement -

ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಿರ್ಮಿಸಲಾಗುತ್ತಿರುವ ಶುದ್ಧ ನೀರಿನ ಘಟಕಕ್ಕೆ ಈಗಾಗಲೇ ೨೦*೧೨ ಸ್ಥಳವನ್ನು ಗ್ರಾಮ ಪಂಚಾಯಿತಿಗೆ ದಾನವಾಗಿ ನೀಡಿದ್ದು, ಗ್ರಾಮದ ಅಭಿವೃದ್ಧಿ ಸಹಿಸದ ಕೆಲ ಕಾಂಗ್ರೆಸ್ ಮುಖಂಡರು ಶುದ್ಧ ನೀರಿನ ಘಟಕವನ್ನು ಖಾಸಗಿ ಸ್ಥಳದಲ್ಲಿ ನಿರ್ಮಿಸಿದ್ದಾರೆ ಎಂದು ಹೇಳುವ ಮೂಲಕ ಗ್ರಾಮಸ್ಥರಲ್ಲಿ ಗೊಂದಲ ಮೂಡಿಸುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪ ಮುನಿಶಾಮಿರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂದಾಳ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಈಗಾಗಲೇ ಅವಶ್ಯಕ ಸಿದ್ದತೆಗಳನ್ನು ನಡೆಸಲಾಗಿದೆ. ಗ್ರಾಮದಲ್ಲಿ ಯಾವುದೇ ಸರ್ಕಾರಿ ಅಥವ ಗ್ರಾಮ ಪಂಚಾಯತಿಗೆ ಸೇರಿದ ಸ್ಥಳವಿಲ್ಲದ ಕಾರಣ ನಮ್ಮದೇ ಸ್ವಂತ ಜಮೀನಿನಲ್ಲಿ ೨೦*೧೨ ಸ್ಥಳವನ್ನು ಗ್ರಾಮ ಪಂಚಾಯತಿಗೆ ದಾನ ಪತ್ರದ ಮೂಲಕ ಬರೆದುಕೊಡಲಾಗಿದ್ದು, ಅಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರ ಸಹಿಗಳನ್ನೊಳಗೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮದ ಅಭಿವೃದ್ಧಿ ಸಹಿಸದ ಕೆಲ ಕಾಂಗ್ರೆಸ್ ಮುಖಂಡರು ಶುದ್ಧ ನೀರಿನ ಘಟಕ ನಿರ್ಮಿಸಲು ತೊಂದರೆ ಕೊಡುವುದು ಸೇರಿದಂತೆ ಬೂದಾಳ ಗ್ರಾಮದ ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ವಿನಾಕಾರಣ ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಅಡ್ಡಿಯುಂಟುಮಾಡುವ ಕಾಂಗ್ರೆಸ್ ಮುಖಂಡರು ಅವರದೇ ಸ್ಥಳವನ್ನು ಗ್ರಾಮ ಪಂಚಾಯತಿಗೆ ಬರೆದುಕೊಟ್ಟಲ್ಲಿ ಅದೇ ಸ್ಥಳದಲ್ಲಿ ನಿರ್ಮಿಸುತ್ತಿದ್ದೆವು. ನಮ್ಮದೇ ಸ್ವಂತ ಸ್ಥಳವನ್ನು ಗ್ರಾಮ ಪಂಚಾಯತಿಗೆ ಬರೆದುಕೊಟ್ಟು ನಂತರ ಆ ಸ್ಥಳ ಗ್ರಾಮ ಪಂಚಾಯತಿಗೆ ಸೇರಿದ ಆಸ್ತಿಯಾಗುತ್ತದೆ. ವಿನಾಕಾರಣ ವಿಷಯ ಗೊತ್ತಿಲ್ಲದೇ ಖಾಸಗಿ ಜಾಗದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸುತ್ತಿದ್ದಾರೆ ಎಂದು ಜನರನ್ನು ಮರಳು ಮಾಡುವುದನ್ನು ಕೂಡಲೇ ಕಾಂಗ್ರೆಸ್ ಮುಖಂಡರು ಬಿಡಬೇಕು ಎಂದಿದ್ದಾರೆ.
ಬೂದಾಳ ಹಾಗು ವೀರಾಪುರ ಗ್ರಾಮಗಳೆರಡೂ ಹೊಂದಿಕೊಂಡಂತಿದ್ದು ಎರಡೂ ಗ್ರಾಮಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಎರಡೂ ಗ್ರಾಮಗಳ ಮಧ್ಯದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲು ಆಲೋಚಿಸಿತ್ತಾದರೂ ಸ್ಥಳಾವಕಾಶದ ಕೊರತೆಯಿಂದ ಬೂದಾಳ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ವೀರಾಪುರ ಗ್ರಾಮದಲ್ಲಿಯೂ ಶುದ್ಧ ನೀರಿನ ಘಟಕ ನಿರ್ಮಿಸಲು ಈಗಾಗಲೇ ಶಾಸಕ ಎಂ.ರಾಜಣ್ಣರೊಂದಿಗೆ ಚರ್ಚಿಸಿದ್ದು ವೀರಾಪುರ ಗ್ರಾಮದಲ್ಲಿಯೂ ಒಂದು ಶುದ್ಧ ನೀರಿನ ಘಟಕ ನಿರ್ಮಿಸಲು ಶಾಸಕರು ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ವೀರಾಪುರ ಗ್ರಾಮದಲ್ಲಿಯೂ ಒಂದು ಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲು ಕಾಂಗ್ರೆಸ್ ಮುಖಂಡರು ಮುಂದಾಗಬೇಕು ಎಂದಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!