ಸುಸ್ಥಿರ ಬೇಸಾಯದ ಕಡೆ ಮಹತ್ವದ ಹೆಜ್ಜೆ

- Advertisement -
- Advertisement -

ಜೀವಾಮೃತ, ಪಂಚಗವ್ಯ, ಬೇವಿನರಸದ ಸಿಂಪಡನೆಗಳಿಂದ ಬೆಳೆಗೆ ತಗುಲುವ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಎಫ್.ಇ.ಎಸ್ ಸಂಸ್ಥೆಯ ಯೋಜನಾ ಅಧಿಕಾರಿ ಶಿಲ್ಪಾ ಎಸ್. ನಲವಡೆ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಗುರುವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ನಡೆದ ರೈತರಿಗೆ ಸುಸ್ಥಿರ ಬೇಸಾಯದ ಕುರಿತು ತರಬೇತಿಯಲ್ಲಿ ಅವರು ಮಾತನಾಡಿದರು.
ರಾಗಿ ಬೆಳೆಗಳಲ್ಲಿ ಕಂಡುಬರುತ್ತಿರುವಂತಹ ಬೀಜದ ಮೋಳಕೆ ಒಡೆಯುವಿಕೆಯಲ್ಲಿನ ಕೋರತೆ, ಮಣ್ಣಿನ ಫಲವತ್ತತೆಯಲ್ಲಿನ ಕೋರತೆಯಿಂದ ರೋಗಗಳ ಹೆಚ್ಚುತ್ತದೆ. ರಾಗಿ ವ್ಯವಸಾಯಕ್ಕೆ ಆಳವಾದ ಬಿತ್ತನೆಯಿಂದಾಗಿ ಬೀಜ ಭೂಮಿಯಲ್ಲಿಯೇ ಸುಟ್ಟು ಹೋಗುವ ಸಂಭವಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ಇವುಗಳ ಮೇಲೆ ಈಗಿನಿಂದಲೇ ಗಮನಹರಿಸಿ ಜೀವಾಮೃತ, ಪಂಚಗವ್ಯ, ಬೇವಿನರಸದ ಸಿಂಪಡನೆಗಳಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಅವರು ವಿವರಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ, ತಿಮ್ಮನಾಯಕನಹಳ್ಳಿ, ಬಶೆಟ್ಟಿಹಳ್ಳಿ, ಎಸ್.ದೇವಗಾನಹಳ್ಳಿ, ದಿಬ್ಬೂರಹಳ್ಳಿ, ಕುಂದಲಗುರ್ಕಿ ಗ್ರಾಮ ಪಂಚಾಯಗಳ ೫೮ ಗ್ರಾಮಗಳಲ್ಲಿ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ರೈತರಿಗೆ ಸುಸ್ಥಿರ ಬೇಸಾಯದ ಕುರಿತು ತರಬೇತಿಯನ್ನು ಒಂದು ತಿಂಗಳ ಕಾಲ ನೀಡಲಾಗುತ್ತಿದೆ. ಸುಮಾರು 1,100 ರೈತರಿಗೆ ತರಬೇತಿ ನೀಡುತ್ತಿರುವುದಾಗಿ ಹೇಳಿದರು.
ಎಫ್.ಇ.ಎಸ್ ಸಂಸ್ಥೆಯ ಯೋಜನಾಧಿಕಾರಿ ಶಿಲ್ಪಾ ಮಾತನಾಡಿ, ಬೀಜಗಳು ಬಿಡಿ ಬಿಡಿಯಾಗಿ ಹುಟ್ಟಿದರೆ ಮಾತ್ರ ರಾಗಿ ಕವಲು ಒಡೆಯಲು ಅವಕಾಶ ದೊರೆಯುತ್ತದೆ ಹಾಗೂ ತೆನೆಗಳು ಹೆಚ್ಚಾಗುತ್ತದೆ ಮತ್ತು ಇದರಿಂದ ರೈತರಿಗೆ ಇಳುವರಿ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ರೈತರು ಬಿತ್ತನೆ ಸ್ಥಳದಲ್ಲಿ ಕೆಲವು ಜಾಗದಲ್ಲಿ ಬೆಳೆಬರದಿದ್ದರೆ, ಅಂತಹ ಜಾಗಗಳಲ್ಲಿ ಹೆಚ್ಚಾಗಿ ಹುಟ್ಟಿರುವ ರಾಗಿ ಪೈರುಗಳನ್ನು ಖಾಲಿ ಇರುವ ಸ್ಥಳಗಳಲ್ಲಿ ನಾಟಿ ಮಾಡುವದರಿಂದ, ಖಾಲಿ ಜಾಗಗಳಲ್ಲಿಯೂ ಬೆಳೆಯನ್ನು ಕಾಣಬಹುದು ಹಾಗೂ ಹೆಚ್ಚು ಇಳುವರಿಯನ್ನು ಪಡೆಯಬಹುದು.
ಈ ಸಂದರ್ಭದಲ್ಲಿ ಎಫ್.ಇ.ಎಸ್ ಸಂಸ್ಥೆಯ ಸಿಬ್ಬಂದಿಗಳಾದ ಲೀಲಾವತಿ, ಸೌಭಾಗ್ಯ, ಗೋಪಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!