ತಾಲ್ಲೂಕಿನಾದ್ಯಂತ ಸೋಮವಾರ ಬಿದ್ದ ಮಳೆಯಿಂದಾಗಿ ನಗರದ ಸಿದ್ಧಾರ್ಥನಗರದಲ್ಲಿ ಮನೆಯೊಂದು ಕುಸಿದಿರುವ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ಬಿದ್ದ ಭಾರೀ ಮಳೆಗೆ ನಗರದ ಬೈಪಾಸ್ ರಸ್ತೆಯ ಸಮೀಪದ ಒಂಬತ್ತನೇ ವಾರ್ಡಿನ ಸಿದ್ಧಾರ್ಥನಗರದಲ್ಲಿರುವ ಪಿ. ಅನ್ವರ್ಪಾಷ ಅವರ ಜಂತಿಕೆಯ ಮನೆ ಚಾವಣಿ ಕುಸಿದಿದೆ. ಕುಸಿತದ ಮುನ್ಸೂಚನೆ ಕಂಡು ಕುಟುಂಬದವರು ಮನೆಯಿಂದ ಹೊರಕ್ಕೆ ಓಡಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಪಾತ್ರೆಗಳು, ಟೀವಿ ಹಾಗೂ ವಿವಿಧ ವಸ್ತುಗಳೆಲ್ಲಾ ಜಖಂಗೊಂಡಿದ್ದು, ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ.
‘ಸೋಮವಾರ ಸಂಜೆ ಮನೆಯ ಗೋಡೆಯಲ್ಲಿ ಶಬ್ದವಾದೊಡನೆ ಮಕ್ಕಳನ್ನೆಲ್ಲಾ ಕರೆದುಕೊಂಡು ಹೊರಬಂದೆವು. ನಮ್ಮ ಕಣ್ಣಮುಂದೆಯೇ ಚಾವಣಿ ಕುಸಿಯಿತು. ಮನೆಯಲ್ಲಿದ್ದ ಎಲ್ಲಾ ವಸ್ತುಗಳೂ ಹಾಳಾಯಿತು. ಮನೆಯಲ್ಲಿ ನಾಲ್ವರು ದೊಡ್ಡವರು ಎರಡು ಪುಟ್ಟ ಮಕ್ಕಳೂ ಇದ್ದೆವು. ಈಗ ನಮಗೆ ಉಳಿಯಲೂ ಸ್ಥಳವಿಲ್ಲ, ಅಡುಗೆಯೂ ಮಾಡಿಕೊಳ್ಳಲಾಗದ ಸ್ಥಿತಿಯುಂಟಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಸಹಾಯ ಮಾಡಬೇಕು’ ಎಂದು ತಿಳಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







