25.8 C
Sidlaghatta
Monday, January 13, 2025

ಮಹಿಳೆಯರ ಅಧ್ಯಯನ ಪ್ರವಾಸ

- Advertisement -
- Advertisement -

ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಗುಜರಾತ್ನ ಆನಂದ್ ಡೈರಿಯಲ್ಲಿ ಹೈನುಗಾರಿಕೆಯ ವಿವಿಧ ಕ್ರಮಗಳನ್ನು ವೀಕ್ಷಿಸಿ ನಮ್ಮ ಭಾಗದ ಇನ್ನಷ್ಟು ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸುವಂತೆ ಪ್ರೇರಿಪಿಸುವ ಕೆಲಸವನ್ನು ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನಿಂದ ಗುಜರಾತ್ನ ಆನಂದ್ ಡೈರಿಗೆ ಹೈನುಗಾರಿಕೆ ವೀಕ್ಷಣೆಗೆಂದು ಅಧ್ಯಯನ ಪ್ರವಾಸಕ್ಕೆ ಶುಕ್ರವಾರ ಹೊರಟ ೪೭ ಮಂದಿ ಮಹಿಳಾ ಸದಸ್ಯರಿಗೂ ಶುಭ ಹಾರೈಸಿ ಅವರು ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಒಟ್ಟು ೧,೭೪೦ ಸಂಘಗಳಿಂದ ಸುಮಾರು ೯ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೈನುಗಾರಿಕೆಯ ಅಭಿವೃದ್ಧಿಗೆ ಮಹಿಳೆಯರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ ಈ ಬಾರಿ ಗುಜರಾತ್ ಪ್ರವಾಸಕ್ಕೆ ಮಹಿಳೆಯರನ್ನು ಮಾತ್ರವೇ ಕಳುಹಿಸಲಾಗುತ್ತಿದೆ.
ಇದೇ ಮೊದಲಬಾರಿಗೆ ತಾಲ್ಲೂಕಿನಿಂದ ಮಹಿಳೆಯರನ್ನು ಪ್ರವಾಸ ಕಳುಹಿಸುತ್ತಿದ್ದು, ಪ್ರವಾಸದಲ್ಲಿ ಗುಜರಾತ್ನ ಅನಂದ್ ಡೈರಿಯಲ್ಲಿ ಇವರಿಗಾಗಿ ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮವಿದೆ. ತರಬೇತಿಯಲ್ಲಿ ಮಹಿಳೆಯರು ಗುಜರಾತ್ನ ಆನಂದ್ ಡೈರಿಯ ಅಭಿವೃದ್ಧಿಯ ಬಗ್ಗೆ ತಿಳಿದುಕೊಂಡು, ಈ ಭಾಗದ ಇನ್ನಷ್ಟು ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಹೇಳಿದರು.
ಕೋಚಿಮುಲ್ ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ, ಎ.ವಿ.ನಾರಾಯಣರೆಡ್ಡಿ, ಉಮೇಶ್ರೆಡ್ಡಿ, ಶ್ರೀನಿವಾಸ್, ಅಮರೇಶ್ ಹಾಗೂ ಕಾರ್ಯದರ್ಶಿಗಳಾದ ಮುನಿರೆಡ್ಡಿ, ಗೋವಿಂದರಾಜು, ಚಂದ್ರೇಗೌಡ, ಚಂದ್ರಾಚಾರಿ, ಚನ್ನಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!