15.1 C
Sidlaghatta
Monday, November 10, 2025

ಹಿಪ್ಪುನೇರಳೆಗೆ ಕ್ರಿಮಿನಾಶಕ ಸಿಂಪಡಣೆ: ರೇಷ್ಮೆ ಹುಳು ನಾಶ

- Advertisement -
- Advertisement -

ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪುನೇರಳೆ ಸೊಪ್ಪು ಸೇವಿಸಿದ ರೇಷ್ಮೆ ಹುಳುಗಳು ನಾಶ ಆಗಿದ್ದು ರೈತನಿಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ. ತಾಲ್ಲೂಕಿನ ಅಬ್ಲೂಡು ಗ್ರಾಮದ ರೈತ ಹುಚ್ಚಪ್ಪನವರ ವಿ.ವೆಂಕಟರೆಡ್ಡಿ ಅವರ ೫೫೦ ಮೊಟ್ಟೆಯಷ್ಟು ರೇಷ್ಮೆ ಹುಳುಗಳು ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪು ನೇರಳೆ ಸೊಪ್ಪು ಸೇವಿಸಿ ಸಾವನ್ನಪ್ಪಿವೆ. ಅದೇ ಗ್ರಾಮದ ಚಂದ್ರು ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟದಲ್ಲಿ ವೆಂಕಟರೆಡ್ಡಿ ಸೊಪ್ಪು ಖರೀದಿಸಿದ್ದರು. ನಿನ್ನೆ ಸಂಜೆ ತಂದ ಸೊಪ್ಪಿಗೆ ಯಾರೋ ಕಿಡಿಗೇಡಿಗಳು ಔಷಧಿ ಸಿಂಪಡನೆ ಮಾಡಿದ್ದರಿಂದಾಗಿ ಮೂರನೇ ಜ್ವರಕ್ಕೆ ಕಾಲಿಟ್ಟಿದ್ದ ಹುಳುಗಳು ಸತ್ತಿವೆ.
’ಬೆಳೆ ಕೈಗೆ ಬಂದಿದ್ದರೆ ೩ ಲಕ್ಷ ಬರುತ್ತಿತ್ತು. ಹೊಸದಾಗಿ ಹುಳುಮನೆಯನ್ನು ಕಟ್ಟಿದ್ದು ಅದಕ್ಕಾಗಿ ದೇನಾ ಬ್ಯಾಂಕಿನಲ್ಲಿ ೧೨ ಲಕ್ಷ ರೂಗಳು ಸಾಲ ಮಾಡಿದ್ದೇನೆ’ ಎಂದು ರೈತ ವೆಂಕಟರೆಡ್ಡಿ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!